ADVERTISEMENT

ಸ್ಪರ್ಧಾ ವಾಣಿ: ಬಹುಆಯ್ಕೆಯ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 0:29 IST
Last Updated 13 ಫೆಬ್ರುವರಿ 2025, 0:29 IST
<div class="paragraphs"><p>ಪ್ರಶ್ನೋತ್ತರಗಳು</p></div>

ಪ್ರಶ್ನೋತ್ತರಗಳು

   ಪ್ರಾತಿನಿಧಿಕ ಚಿತ್ರ

ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ

ಕೃಷ್ಣಾ ನದಿಯು ಕೆಳಗಿನ ಯಾವ ಪ್ರದೇಶದಲ್ಲಿ ಉಗಮವಾಗುತ್ತದೆ?

ADVERTISEMENT

ಎ. ಮಹಾರಾಷ್ಟ್ರದ ಮಹಾಬಲೇಶ್ವರ.

ಬಿ. ಅರವಳ್ಳಿ ಪರ್ವತ ಶ್ರೇಣಿಯಲ್ಲಿ.

ಸಿ. ಆಂಧ್ರಪ್ರದೇಶದ ಪೂರ್ವ ಘಟ್ಟಗಳಲ್ಲಿ.

ಡಿ. ನೀಲಗಿರಿ ಪರ್ವತ.

ಉತ್ತರ: ಎ 

ಕೆಳಗಿನ ಯಾವ ನದಿಗಳನ್ನು ಕೃಷ್ಣಾ ನದಿಯ ಬಲದಂಡೆಯ ಉಪನದಿಗಳು ಎಂದು ಪರಿಗಣಿಸಬಹುದು?

1. ಭೀಮ 2. ಮುನ್ನೇರು

3. ಘಟಪ್ರಭಾ 4. ತುಂಗಭದ್ರಾ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 3  ಬಿ. 3 ಮತ್ತು 4

ಸಿ. 4 ಮಾತ್ರ  ಡಿ. 3 ಮಾತ್ರ.

ಉತ್ತರ: ಬಿ

ಜೀತ ಪದ್ಧತಿ ವ್ಯವಸ್ಥೆ ನಿರ್ಮೂಲನ ಕಾಯ್ದೆ-1976ರ ಅನ್ವಯ ಕೆಳಗಿನ ಯಾವ ಹಂತಗಳಲ್ಲಿ ವಿಚಕ್ಷಣಾ ಸಮಿತಿಗಳನ್ನು ಸ್ಥಾಪಿಸಬೇಕಾಗಿದೆ?

ಎ. ರಾಜ್ಯ ಮಟ್ಟದಲ್ಲಿ. ಬಿ. ರಾಷ್ಟ್ರ ಮಟ್ಟದಲ್ಲಿ.

ಸಿ. ಜಿಲ್ಲಾ ಮಟ್ಟದಲ್ಲಿ. ಡಿ. ತಾಲೂಕು ಮಟ್ಟದಲ್ಲಿ.

ಉತ್ತರ: ಸಿ

 ಕೆಳಗಿನ ಯಾವ ಸಚಿವಾಲಯದ ಅಡಿಯಲ್ಲಿ ಜೀತ ಪದ್ಧತಿ ಸಂಬಂಧಿತ ರಾಷ್ಟ್ರ ಮಟ್ಟದ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ?

ಎ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.

ಬಿ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ.

ಸಿ. ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ.

ಡಿ. ಸಂಪುಟ ಕಾರ್ಯದರ್ಶಿ ಕಚೇರಿ.

ಉತ್ತರ: ಎ

ವಿಶ್ವಸಂಸ್ಥೆಯ ಅನ್ವಯ ವಿಶ್ವ ಆವಾಸ ದಿವಸವನ್ನು ಯಾವ ಸಂದರ್ಭದಲ್ಲಿ ಆಚರಿಸಲಾಗುತ್ತದೆ?

ಎ. ಪ್ರತಿವರ್ಷದ ಅಕ್ಟೋಬರ್ ತಿಂಗಳ ಮೊದಲ ಸೋಮವಾರದಂದು.

ಬಿ. ಪ್ರತಿ ವರ್ಷದ ಅಕ್ಟೋಬರ್ ತಿಂಗಳ ಎರಡನೇ ಸೋಮವಾರದಂದು.

ಸಿ. ಪ್ರತಿ ವರ್ಷದ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರದಂದು.

ಡಿ. ಪ್ರತಿ ವರ್ಷದ ನವಂಬರ್ ತಿಂಗಳ ಮೂರನೇ ಶನಿವಾರದಂದು.

ಉತ್ತರ: ಎ

ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಪ್ರಸ್ತುತ ವರ್ಷದಲ್ಲಿ ನಗರ ಪ್ರದೇಶದ ಕೊಡುಗೆ ಎಷ್ಟು?

ಎ. ಶೇ 55ರಷ್ಟು ಬಿ. ಶೇ 66ರಷ್ಟು

ಸಿ. ಶೇ 75ರಷ್ಟು ಡಿ. ಶೇ 80ರಷ್ಟು.

ಉತ್ತರ: ಬಿ

ಇತ್ತೀಚೆಗೆ ಕೆಳಗಿನ ಯಾವ ಚಿತ್ರ ನಟನ ಸ್ಮರಣಾರ್ಥವಾಗಿ ಭಾರತದ ರಾಷ್ಟ್ರಪತಿ ನಾಣ್ಯವನ್ನು ಬಿಡುಗಡೆ ಮಾಡಿದರು?

ಎ. ಡಾ. ರಾಜಕುಮಾರ್.

ಬಿ. ಎನ್. ಟಿ. ರಾಮರಾವ್.

ಸಿ. ಎಂ. ಜಿ. ರಾಮಚಂದ್ರನ್.

ಡಿ. ದೇವಾನಂದ್.

ಉತ್ತರ : ಬಿ

ಕೆಳಗಿನ ಯಾವ ರಾಷ್ಟ್ರಗಳಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರು ವಿದ್ಯುತ್ ಉತ್ಪಾದನಾ ಘಟಕಗಳನ್ನು ಉದ್ಘಾಟಿಸಿದರು?

1. ಉಗಾಂಡ. 2. ಸೋಮಾಲಿಯ.

3. ದಕ್ಷಿಣ ಆಫ್ರಿಕಾ. 4. ಮಾಲಿ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 4  ಬಿ. 1 ಮತ್ತು 2

ಸಿ. 2 ಮತ್ತು 4  ಡಿ. 3 ಮತ್ತು 4

ಉತ್ತರ : ಎ

 ಗ್ರಾಮೀಣ ರಸ್ತೆಗಳು ಮತ್ತು ಜಿಲ್ಲಾಮಟ್ಟದ ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸಲು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿದ ಸಮಿತಿ ಯಾವುದು?

ಎ. ವೇಣುಗೋಪಾಲ್ ಸಮಿತಿ.

ಬಿ. ರಾಜಗೋಪಾಲ್ ಸಮಿತಿ.

ಸಿ. ಪ್ರಕಾಶ್ ಸಿನ್ಹಾ ಸಮಿತಿ.

ಡಿ. ಪುಟ್ಟಸ್ವಾಮಿ ಸಮಿತಿ.

ಉತ್ತರ : ಎ

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಕೆಳಗಿನ ಯಾವ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸಲಾಗುತ್ತದೆ?

1. ಆಸ್ಪತ್ರೆಗಳು.

2. ಗ್ರಾಮೀಣ ಕೃಷಿ ಮಾರುಕಟ್ಟೆಗಳು.

3. ಶೈಕ್ಷಣಿಕ ಸಂಸ್ಥೆಗಳು.

4. ಸರ್ಕಾರಿ ಕಚೇರಿಗಳು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ  ಬಿ. 1, 2 ಮತ್ತು 3

ಸಿ. 1 ಮತ್ತು 3  ಡಿ. 2 ಮತ್ತು 4

ಉತ್ತರ : ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.