ADVERTISEMENT

ಸ್ಪರ್ಧಾವಾಣಿ: ಬಹುಆಯ್ಕೆಯ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 18:35 IST
Last Updated 2 ಏಪ್ರಿಲ್ 2025, 18:35 IST
   

1. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುವು ಪ್ಲಾಸ್ಟಿಕ್ ಚೀಲಗಳ ಬಳಕೆಯ ಸಮಸ್ಯೆಗೆ ಪರಿಹಾರಗಳಾಗಿವೆ

ಎ. ಪಾಲಿಪ್ರೊಪಿಲೀನ್ ಚೀಲ ಬಳಕೆ ಮಾಡುವುದು

ಬಿ. ಪರಿಸರ ಸ್ನೇಹಿ ಪರ್ಯಾಯ ವಸ್ತುಗಳಾದ ಹತ್ತಿ, ಸೆಣಬು ಮತ್ತು ಇತ್ಯಾದಿಗಳಿಂದ ತಯಾರಿಸಿದ ಚೀಲಗಳನ್ನು ಬಳಸುವುದು

ADVERTISEMENT

ಸರಿಯಾದ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

-ಉತ್ತರ: ಡಿ

2. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ 1995ರಲ್ಲಿ ಪ್ರಾರಂಭವಾದ ಕೇಂದ್ರ ವಲಯದ ಯೋಜನೆಯಾಗಿದೆ

ಬಿ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ರತಿ ಎಂಪಿ ಕ್ಷೇತ್ರಕ್ಕೆ ವಾರ್ಷಿಕವಾಗಿ ₹ 5 ಕೋಟಿ ಒದಗಿಸಲಾಗುತ್ತದೆ

ಸರಿಯಾದ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು ಡಿ. ಎರಡೂ ಸರಿ

-ಉತ್ತರ: ಬಿ

 3. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ರಾಜ್ಯದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು 2001–02ರಲ್ಲಿ ಪ್ರಾರಂಭಿಸಲಾಗಿದೆ

ಬಿ. ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ತಲಾ ₹500.00 ಲಕ್ಷಗಳನ್ನು ಒದಗಿಸಲಾಗುತ್ತದೆ

ಸರಿಯಾದ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

-ಉತ್ತರ: ಎ

4. ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ತಗ್ಗಿಸಲು ಕೆಳಗಿನ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ?

1. ನಗದು ಮೀಸಲು ಅನುಪಾತವನ್ನು ಹೆಚ್ಚಿಸುವುದು

2. ಹೆಚ್ಚುವರಿ ನಗದು ಮೀಸಲು ಅನುಪಾತವನ್ನು ಜಾರಿಗೆ ತರುವುದು

3. ಶಾಸನೀಯ ದ್ರವ್ಯತಾ ಅನುಪಾತ ಹೆಚ್ಚಿಸುವುದು

4. ರೆಪೋ ದರವನ್ನು ಹೆಚ್ಚಿಸುವುದು

ಸರಿ ಉತ್ತರ ಗುರುತಿಸಿ

ಎ. 1, 2, 3 ಮತ್ತು 4 →ಬಿ. 1 ಮತ್ತು 2

ಸಿ. 2 ಮತ್ತು 3 →ಡಿ. 3 ಮತ್ತು 4
-ಉತ್ತರ: ಎ

5. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೆಳಗಿನ ಯಾವ ಸಂದರ್ಭದಲ್ಲಿ ಹೆಚ್ಚುವರಿ ನಗದು ಮೀಸಲು ಅನುಪಾತವನ್ನು ಜಾರಿಗೆ ತಂದಿತ್ತು?

ಎ. ಆಹಾರದ ಹಣದುಬ್ಬರ ಹೆಚ್ಚಳವಾದ ಕಾರಣದಿಂದ.

ಬಿ. ಆಹಾರ ಉತ್ಪನ್ನಗಳ ಬೆಲೆಗಳು ಕಡಿಮೆಯಾದ ಕಾರಣದಿಂದ.

ಸಿ. 2000 ರೂ ಮೌಲ್ಯದ ನೋಟುಗಳ ಅಮಾನಿಕರಣದ ನಂತರ.
ಡಿ. ರಷ್ಯಾ–ಉಕ್ರೇನ್ ಯುದ್ಧದ ನಂತರ.
-ಉತ್ತರ: ಸಿ

6. ಈ ಹೇಳಿಕೆಗಳನ್ನು ಪರಿಗಣಿಸಿ.
ಎ. ಸಂವಿಧಾನದ ಅನುಚ್ಛೇದ 32 ಅಡಿಯಲ್ಲಿ ಸುಪ್ರೀಂ ಕೋರ್ಟ್ ಗೆ ಯಾವುದೇ ಸಂಬಂಧಪಟ್ಟ ವ್ಯಕ್ತಿ ಅಥವಾ ಬೇರೆಯವರು ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಹುದು.

ಬಿ. ಸಂವಿಧಾನದ ಅನುಚ್ಛೇದ 226 ಅಡಿಯಲ್ಲಿ ಹೈಕೋರ್ಟ್ ಗೆ ಯಾವುದೇ ಸಂಬಂಧಪಟ್ಟ ವ್ಯಕ್ತಿ ಅಥವಾ ಬೇರೆಯವರು ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಹುದು.
ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ  ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

-ಉತ್ತರ: ಡಿ

7. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದರೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಜನರ ಹಿತರಕ್ಷಣೆಗಾಗಿ ಹೂಡಲಾದ ಅರ್ಜಿಗಳಾಗಿವೆ.

ಬಿ. ಸಂವಿಧಾನದ ವಿಧಿ 32 ರನ್ವಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸವೋಚ್ಛ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ವಿಸ್ತರಣೆಯಾಗಿದೆ.
ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪುಡಿ. ಎರಡೂ ಸರಿ

-ಉತ್ತರ: ಡಿ

8. ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ದುರ್ಬಲ ವರ್ಗಗಳ ಮೂಲಭೂತ ಹಕ್ಕುಗಳ ಅತಿಕ್ರಮಣಗಳ ವಿರುದ್ದ ಇದನ್ನು ಸಲ್ಲಿಸಬಹುದು.

ಬಿ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯಗಳ ವಿರುದ್ಧ ಇದನ್ನು ಸಲ್ಲಿಸಲು ಅಸಾಧ್ಯ

ಸರಿ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ  ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು ಡಿ. ಎರಡೂ ಸರಿ
-ಉತ್ತರ: ಎ

9. ಈ ಹೇಳಿಕೆಗಳನ್ನು ಪರಿಗಣಿಸಿ.
ಎ. ಭಾರತದಲ್ಲಿ 5ಜಿ ಸೇವೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1, 2023ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಉದ್ಘಾಟಿಸಿದರು

ಬಿ. ಅಲ್ಟ್ರಾ–ಫಾಸ್ಟ್ ಇಂಟರ್ನೆಟ್ ಮತ್ತು ವರ್ಧಿತ ಮಲ್ಟಿಮೀಡಿಯಾ ಅನುಭವಗಳನ್ನು ನೀಡಲು 5ಜಿ ನೆಟ್‌ವರ್ಕ್ ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತದೆ
ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ  ⇒ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು ⇒ಡಿ. ಎರಡೂ ಸರಿ
-ಉತ್ತರ: ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.