1. ಪ್ರಸ್ತುತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಂಟೊನಿಯೊ ಗುಟೆರಸ್ ಯಾವ ದೇಶದವರು?
ಅ) ಪೋರ್ಚುಗಲ್
ಆ) ಇಟಲಿ
ಇ) ಜರ್ಮನಿ
ಈ) ರಷ್ಯಾ
2. ಕುಶಾಗ್ರ ರಾವತ್ ಯಾವ ಕ್ರೀಡೆಯಲ್ಲಿ ಇತ್ತೀಚೆಗೆ ವಿಶೇಷ ಸಾಧನೆ ಮಾಡುತ್ತಿರುವ ಕ್ರೀಡಾಪಟು?
ಅ) ಹಾಕಿ
ಆ) ಬೇಸ್ಬಾಲ್
ಇ) ಕುಸ್ತಿ
ಈ) ಈಜು
3. ಭೂಮಿಯ ಮೇಲಿನ ಅತಿ ದೊಡ್ಡ ಶುದ್ಧ ನೀರಿನ ಮೂಲ ಯಾವುದು?
ಅ) ನದಿಗಳು
ಆ) ಹಿಮನದಿಗಳು
ಇ) ಸರೋವರಗಳು
ಈ) ಕೆರೆಗಳು
4. ಪ್ರಸಿದ್ಧವಾದ ಕಾಮಾಕ್ಯ ಕ್ಷೇತ್ರವು ಯಾವ ರಾಜ್ಯದಲ್ಲಿದೆ?
ಅ) ಬಿಹಾರ
ಆ) ಅಸ್ಸಾಂ
ಇ) ಪಂಜಾಬ್
ಈ) ಮೇಘಾಲಯ
5. ವಾಣಿವಿಲಾಸ ಸಾಗರ ಜಲಾಶಯದ ನಿರ್ಮಾಣ ಯಾವ ದಿವಾನರ ಕಾಲದಲ್ಲಿ ನಡೆಯಿತು?
ಅ) ವಿಶ್ವೇಶ್ವರಯ್ಯ
ಆ) ಮಿರ್ಜಾ ಇಸ್ಮಾಯಿಲ್
ಇ) ಟಿ. ಆನಂದರಾವ್
ಈ) ಕೆ. ಶೇಷಾದ್ರಿ ಅಯ್ಯರ್
6. ಗಿರೀಶ್ ಕಾಸರವಳ್ಳಿ ನಿರ್ದೇಶನದ ಗುಲಾಬಿಟಾಕೀಸ್ ಚಲನಚಿತ್ರ ಯಾರು ರಚಿಸಿದ ಸಣ್ಣ ಕಥೆಯನ್ನು ಆಧರಿಸಿದೆ?
ಅ) ಜಯಂತ್ ಕಾಯ್ಕಿಣಿ
ಆ) ವೈದೇಹಿ
ಇ) ರೇಖಾ ಕಾಖಂಡಕಿ
ಈ) ವೀಣಾ ಶಾಂತೇಶ್ವರ
7. ಪುಲಿಟ್ಜರ್ ಪ್ರಶಸ್ತಿಯನ್ನು ಯಾವ ಕ್ಷೇತ್ರದ ವಿಶಿಷ್ಟ ಸಾಧನೆಗಾಗಿ ನೀಡಲಾಗುತ್ತದೆ?
ಅ) ಕ್ರೀಡೆ
ಆ) ಕೃಷಿ
ಇ) ಪತ್ರಿಕೋದ್ಯಮ
ಈ)ರಾಜಕೀಯ
8. ಭಾರತೀಯ ಜ್ಞಾನಪೀಠ ಪ್ರಶಸ್ತಿಯು ಮೊತ್ತಮೊದಲು ಲಭಿಸಿದ್ದು ಯಾವ ಭಾಷೆಯ ಸಾಹಿತಿಗೆ?
ಅ) ಕನ್ನಡ
ಆ) ಹಿಂದಿ
ಇ) ಬೆಂಗಾಲಿ
ಈ) ಮಲಯಾಳಂ
9. ಹೃದಯ ರೋಗಿಗಳಿಗೆ ‘ಇಕೋಸ್ಪ್ರಿನ್’ ಔಷಧಿಯನ್ನು ಏಕೆ ನೀಡಲಾಗುತ್ತದೆ?
ಅ) ರಕ್ತವನ್ನು ತೆಳುಗೊಳಿಸಲು
ಆ) ದೈಹಿಕ ಶಕ್ತಿ ವರ್ಧನೆಗಾಗಿ
ಇ) ಮರೆವು ಬಾರದಿರಲು
ಈ) ನರ ದೌರ್ಬಲ್ಯಕ್ಕೆ
10. ಹೇಸರಗತ್ತೆಗಳು ಯಾವ ಎರಡು ಬಗೆಯ ಪ್ರಾಣಿಗಳ ಸಂಯೋಗದಿಂದ ಜನಿಸುತ್ತವೆ?
ಅ) ಕತ್ತೆ ಮತ್ತು ಕುದುರೆ
ಆ) ಕುದುರೆ ಮತ್ತು ಎಮ್ಮೆ
ಇ) ಮೇಕೆ ಮತ್ತು ಕುದುರೆ
ಈ) ಮೇಕೆ ಮತ್ತು ಕತ್ತೆ
ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ನಿದ್ರಾ ಹೀನತೆ
2. ವಸುಧೇಂದ್ರ
3. ಒಡಿಶಾ
4. ಧಾರ್ಮಿಕ ಕೃತಿಗಳು
5. ನಾಲ್ಕು
6. ಬಾಯಲ್ಲಿ ತಾಳವಿನ್ಯಾಸವನ್ನು ಹಾಡುವುದು
7. ವಿವೇಕ್ ಒಬೆರಾಯ್
8. ಚಿತ್ರದುರ್ಗ
9. ಕ್ಲೋರೋಪ್ಲಾಸ್ಟ್
10. ಚೆನ್ನೈ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.