ADVERTISEMENT

ನಿಖಿಲ್‌ ಕೈಗೆ ಪೆಟ್ಟು, ಚಿಕಿತ್ಸೆ: ಬೆಂಗಳೂರಿನಲ್ಲಿ ವಿಶ್ರಾಂತಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 14:18 IST
Last Updated 12 ಏಪ್ರಿಲ್ 2019, 14:18 IST
   

ಮಂಡ್ಯ: ನಿರಂತರ ಪ್ರಚಾರದಲ್ಲಿ ತೊಡಗಿದ್ದ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಅವರ ಕೈಗೆ ಪೆಟ್ಟಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಪ್ರಚಾರವನ್ನು ರದ್ದುಪಡಿಸಲಾಗಿತ್ತು. ಕೈಗೆ ಚಿಕಿತ್ಸೆ ಪಡೆದ ಅವರು ಬೆಂಗಳೂರಿನಲ್ಲಿ ಉಳಿದು ವಿಶ್ರಾಂತಿ ಪಡೆದರು.

ಗುರುವಾರವಿಡೀ ಜಿಲ್ಲೆಯ ವಿವಿಧೆಡೆ ನಿರಂತರವಾಗಿ ನಿಖಿಲ್‌ ಪ್ರಚಾರ ನಡೆಸಿದರು. ಅಭಿಮಾನಿಗಳಿಗೆ ಹಸ್ತಲಾಘವ ನೀಡುವ ಸಂದರ್ಭದಲ್ಲಿ ಅವರ ಬಲಗೈಗೆ ಪೆಟ್ಟಾಗಿತ್ತು. ಕೈಗೆ ಬ್ಯಾಂಡ್‌ಏಡ್‌ ಸುತ್ತಿಕೊಂಡಿದ್ದ ಅವರು ಪ್ರಚಾರ ಮುಂದುವರಿಸಿದ್ದರು. ಆದರೆ ಕೈನೋವು ಹೆಚ್ಚಾದ ಹಿನ್ನೆಲೆಯಲ್ಲಿ ಅವರು ವಿಶ್ರಾಂತಿಗೆ ಮೊರೆ ಹೋದರು. ಅವರ ಗೈರುಹಾಜರಿಯಲ್ಲಿ ತಾಯಿ ಅನಿತಾ ಕುಮಾರಸ್ವಾಮಿ ಪ್ರಚಾರ ನಡೆಸಿದರು. ನಿಖಿಲ್‌ ಗುಣಮುಖರಾಗಿದ್ದು ಶನಿವಾರದಿಂದ ಎಂದಿನಂತೆ ಪ್ರಚಾರ ಮುಂದುವರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT