ADVERTISEMENT

ಅವರಿಗೆ ಅಲಿ, ನಮಗೆ ಬಜರಂಗ ಬಲಿ: ಯೋಗಿ

ಪಿಟಿಐ
Published 9 ಏಪ್ರಿಲ್ 2019, 19:34 IST
Last Updated 9 ಏಪ್ರಿಲ್ 2019, 19:34 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಮೀರಠ್ (ಉತ್ತರ ಪ್ರದೇಶ): ಮುಸ್ಲಿಂ ಲೀಗ್‌ ಅನ್ನು ‘ವೈರಸ್’ ಎಂದು ಕರೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಹಿಂದೂ ಹಾಗೂ ಮುಸ್ಲಿಂ ಮತದಾರರು ‘ಅಲಿ–ಬಜರಂಗ ಬಲಿ’ ಸ್ಪರ್ಧೆಯಲ್ಲಿದ್ದಾರೆ ಎಂದಿದ್ದಾರೆ.

‘ವಿರೋಧಪಕ್ಷಗಳ ಮೈತ್ರಿಕೂಟ ಬೆಂಬಲಿಸುವಂತೆ ಮುಸ್ಲಿಮರಿಗೆ ಮಾಯಾವತಿ ಕರೆ ನೀಡಿದ್ದಾರೆ. ಹಿಂದೂಗಳು ಬಿಜೆಪಿಗೆ ಮತ ಹಾಕುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ’ ಎಂದು ಯೋಗಿ ಹೇಳಿದ್ದಾರೆ.

‘ಕಾಂಗ್ರೆಸ್, ಎಸ್‌ಪಿ ಹಾಗೂ ಬಿಎಸ್‌ಪಿ ‘ಅಲಿ’ ಮೇಲೆ ವಿಶ್ವಾಸವಿಟ್ಟರೆ, ನಮಗೆ ‘ಬಜರಂಗ ಬಲಿ’ ಮೇಲೆ ನಂಬಿಕೆ ಇದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.