ಶನಿವಾರಸಂತೆ: ‘ನಾನು ದೇಶದ ಪ್ರಧಾನಿಯಾಗಿದ್ದಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಕೋಮುಶಕ್ತಿ ಬೆಳೆಯಲು ಬಿಡಲಿಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ಸಮೀಪದ ಗಡಿಗ್ರಾಮ ಚಂಗಡಹಳ್ಳಿಯಲ್ಲಿ ಅವರು ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು.
‘ಯಾವುದೇ ಜಾತಿ, ಧರ್ಮವಿರಲಿ ದೇಶದ ಏಕತೆ ಮುಖ್ಯ. ಕೊಡಗು-ಮೈಸೂರು ಕ್ಷೇತ್ರದ ಅಭ್ಯರ್ಥಿ ವಿಜಯಶಂಕರ್ ಗೆಲುವಿಗೆ ಶ್ರಮಿಸಿ’ ಎಂದರು.
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿದರು.
ಜೆಡಿಎಸ್ ಕೊಡಗು ಜಿಲ್ಲಾ ವಕ್ತಾರ ಎಂ.ಎ.ಆದಿಲ್ ಪಾಶ, ಉಪಾಧ್ಯಕ್ಷ ಡಿ.ಪಿ.ಬೋಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಚ್.ಬಿ.ಜಯಮ್ಮ, ಮುಖಂಡರಾದ ಬಿ.ಎನ್.ಮುತ್ತೇಗೌಡ, ಯಸಳೂರು ಹೋಬಳಿ ಅಧ್ಯಕ್ಷ ಗುರುರಾಜ್, ಬೆಂಬಳೂರು ದೇವಪ್ಪ, ಜಾತ್ನಳ್ಳಿ ಪುಟ್ಟಸ್ವಾಮಿಗೌಡ, ಬೆಕ್ಕನಳ್ಳಿ ನಾಗರಾಜ್, ಮುಳ್ಳೂರು ಆನಂದ್, ಸಚಿನ್ ಪ್ರಸಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.