ADVERTISEMENT

ಮುಸ್ಲಿಂ ಮುಖಂಡರ ಎದುರು ಬಿಕ್ಕಿ ಬಿಕ್ಕಿ ಅತ್ತ ಮಾಜಿ ಸ್ಪೀಕರ್‌ ರಮೇಶ್ ಕುಮಾರ್...

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 4:49 IST
Last Updated 20 ಏಪ್ರಿಲ್ 2023, 4:49 IST
 ಮುಸ್ಲಿಂ ಮುಖಂಡರ ಎದುರು ದುಃಖ ತೋಡಿಕೊಳ್ಳುತ್ತಿರುವ ರಮೇಶ್‌ ಕುಮಾರ್‌
ಮುಸ್ಲಿಂ ಮುಖಂಡರ ಎದುರು ದುಃಖ ತೋಡಿಕೊಳ್ಳುತ್ತಿರುವ ರಮೇಶ್‌ ಕುಮಾರ್‌   

ಕೋಲಾರ: ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಶ್ರೀನಿವಾಸಪುರ ಪಟ್ಟಣದಲ್ಲಿ ಮುಸ್ಲಿಂ ಮುಖಂಡರ ಎದುರು ಬಿಕ್ಕಿ ಬಿಕ್ಕಿ ಅಳುತ್ತಾ ದುಃಖ ತೋಡಿಕೊಳ್ಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಧಾನಸಭೆಯ ಮಾಜಿ ಸಭಾಧ್ಯಕ್ಷರೂ ಆಗಿರುವ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಪ್ರಮಾಣಪತ್ರದಲ್ಲಿ ಒಟ್ಟು ₹ 4.51 ಕೋಟಿ ಆಸ್ತಿ ಉಲ್ಲೇಖಿಸಿದ್ದಾರೆ. ರಾಯಲ್ಪಾಡು ಹೋಬಳಿಯಲ್ಲಿ 57.25 ಎಕರೆ ಕೃಷಿ ಭೂಮಿ ಇರುವುದನ್ನು ತೋರಿಸಿದ್ದಾರೆ. ಈಚೆಗೆ ಅವರ ಪತ್ನಿ ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT