ಶಿವಮೊಗ್ಗ: ಪಕ್ಷದ ಸೂಚನೆ ಪಾಲಿಸಿ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೊ ಕರೆ ಮಾಡಿ ಅಭಿನಂದಿಸಿದ್ದಾರೆ.
ಕರೆಯ ವೇಳೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಈಶ್ವರಪ್ಪ ಅವರಿಗೆ ನರೇಂದ್ರ ಮೋದಿ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಈಶ್ವರಪ್ಪ, ‘ಖಂಡಿತವಾಗಲೂ ನಾವು ಗೆಲ್ಲುತ್ತೇವೆ ಸರ್. ಏನೂ ಸಮಸ್ಯೆ ಇಲ್ಲ. ನಿಮ್ಮ ಆಶೀರ್ವಾದ ಮಾತ್ರ ಬೇಕಿದೆ’ ಎಂದು ಹೇಳುತ್ತಾರೆ.
ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಕರೆ ಮಾಡಿ ಮಾತನಾಡುವುದು ನಮಗೆಲ್ಲಾ ಬಹಳ ಖುಷಿ ಆಗುತ್ತದೆ ಸರ್ ಎಂದು ಹೇಳುತ್ತಾರೆ. ಮಗ ಕೆ.ಈ.ಕಾಂತೇಶ್ ಹಾಗೂ ಸೊಸೆ ಕುತೂಹಲದಿಂದ ಸಂಭಾಷಣೆಯನ್ನು ನೋಡುವ ವಿಡಿಯೊ ಈಗ ವೈರಲ್ ಆಗಿದೆ. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಪ್ರಧಾನಿ ಅವರು ಕರೆ ಮಾಡಿದ್ದನ್ನು ಖಚಿತಪಡಿಸಿದರು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.