ADVERTISEMENT

ಲೋಕಸಭಾ ಚುನಾವಣೆ | ಕೆ.ಆರ್.ಪುರದ ಮಂಡೂರಿನಲ್ಲಿ ಶತಾಯುಷಿ ಮತದಾನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 15:59 IST
Last Updated 13 ಏಪ್ರಿಲ್ 2024, 15:59 IST
ಶತಾಯುಷಿ ಕಮಲಮ್ಮ ನಾರಾಯಣಸ್ವಾಮಿ ಅವರು ಮತದಾನ ಮಾಡಿ ಶಾಯಿ ಗುರುತು ತೋರಿಸಿದರು. ಕುಟುಂಬಸ್ಥರು ಜೊತೆಗಿದ್ದರು
ಶತಾಯುಷಿ ಕಮಲಮ್ಮ ನಾರಾಯಣಸ್ವಾಮಿ ಅವರು ಮತದಾನ ಮಾಡಿ ಶಾಯಿ ಗುರುತು ತೋರಿಸಿದರು. ಕುಟುಂಬಸ್ಥರು ಜೊತೆಗಿದ್ದರು   

ಕೆ.ಆರ್.ಪುರ: 85 ವರ್ಷ ಮೀರಿದವರಿಗೆ ಮನೆಯಲ್ಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಶತಾಯುಷಿ ಕಮಲಮ್ಮ ನಾರಾಯಣಸ್ವಾಮಿ ಅವರು ಮನೆಯಲ್ಲಿ ಶನಿವಾರ ಮತದಾನ ಮಾಡಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಂಡೂರು ನಿವಾಸಿ ಕಮಲಮ್ಮ ಅವರಿಗೆ 103 ವಯಸ್ಸಾಗಿದೆ.

‘ಶತಾಯುಷಿ ನಮ್ಮ ಕುಟುಂಬದಲ್ಲಿ, ಮಂಡೂರಿನಲ್ಲಿರುವುದು ಗ್ರಾಮದ ಹೆಮ್ಮೆ. ಪ್ರತಿಯೊಬ್ಬ ಮತದಾರರು ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ಕಮಲಮ್ಮ ಪುತ್ರ ಶ್ರೀನಿವಾಸ್ ಗೌಡ ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.