– ಡಾ. ಜಿ.ರಾಮಕೃಷ್ಣ, ಚಿಂತಕ
ಯಾವುದೇ ಒಂದು ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತ ಪಡೆದರೂ, ಇಂದಿನ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ, ಸರ್ಕಾರ ರಚಿಸುವ ಅವಕಾಶ ಆ ಪಕ್ಷಕ್ಕೇ ಬರಬಹುದು. ಹೀಗೆ ರಚನೆಯಾಗುವ ಅಲ್ಪಸಂಖ್ಯಾತ ಸರ್ಕಾರವು ಇಡೀ ದೇಶದ ಮೇಲೆ ಪ್ರಭುತ್ವ ಸಾಧಿಸಿ, ರಾಷ್ಟ್ರದ ಸಂಪತ್ತನ್ನು ಪರಭಾರೆ ಮಾಡಬಹುದಾದ ಅಪಾಯ ಇರುತ್ತದೆ. ಈ ಸಾಧ್ಯತೆಗಳನ್ನು ತಡೆಯಬೇಕಾದರೆ ಮತದಾರರು ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಇರುವ ಒಂದು ಪ್ರಮುಖ ಸಾಧನವೇ ಚುನಾವಣೆ. ಇದರಲ್ಲಿ ಪಾಲ್ಗೊಳ್ಳುವ ಮತದಾರರು ತಮ್ಮದೇ ಅಭಿಪ್ರಾಯವನ್ನು ಇಟ್ಟುಕೊಂಡಿರುತ್ತಾರೆ. ಏನೇ ಇದ್ದರೂ ಅದು ಅಭಿವ್ಯಕ್ತ
ಗೊಳ್ಳಬೇಕು.
ರಾಜ್ಯದ ಮಟ್ಟಿಗೆ ಹೇಳುವುದಾದರೆ, ಈ ಚುನಾವಣೆಯು ದೇಶದ ಭವಿಷ್ಯದ ರಾಜಕೀಯದ ಮೇಲೆ ಪ್ರಭಾವ ಬೀರಲಿದೆ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ರಾಜ್ಯವು ನಿಖರ ಸಂದೇಶವನ್ನು ಕಳುಹಿಸಬೇಕಿದೆ. ಈ ಸಂದೇಶ ಸ್ಪಷ್ಟವಾಗಿ ವ್ಯಕ್ತವಾಗಬೇಕಾದರೆ ಪ್ರತಿಯೊಬ್ಬರೂ ಮತದಾನ ಮಾಡಬೇಕು.
ಅಭಿಪ್ರಾಯವನ್ನು ವ್ಯಕ್ತಪಡಿಸುವುದರಲ್ಲೇ ಪ್ರಜಾಪ್ರಭುತ್ವದ ಮೂಲ ಕಲ್ಪನೆ ಅಡಗಿದೆ. ಇದನ್ನು ಎಲ್ಲ ಮತದಾರರೂ ಅರ್ಥ ಮಾಡಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.