ಬಿಡದಿ (ರಾಮನಗರ): ಕಾಂಗ್ರೆಸ್ ಶಾಸಕರ ತಂಡವು ಎರಡು ಖಾಸಗಿ ಬಸ್ ಹಾಗೂ ಕಾರುಗಳಲ್ಲಿ ಇಲ್ಲಿನ ಈಗಲ್ ಟನ್ ರೆಸಾರ್ಟ್ಗೆ ಗುರುವಾರ ಮಧ್ಯಾಹ್ನ ವಾಪಸ್ ಆಯಿತು.
ಗುರುವಾರವೂ ಶಾಸಕರು ರೆಸಾರ್ಟ್ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ಆಧರಿಸಿ ಕಾಂಗ್ರೆಸ್ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಜೆಡಿಎಸ್ ಕೂಡ ರೆಸಾರ್ಟ್ ವಾಸ್ತವ್ಯಕ್ಕೆ ಮೊರೆ ಹೋಗುವ ಸಾಧ್ಯತೆ ಇದೆ. ಅವರನ್ನೂ ಇದೇ ರೆಸಾರ್ಟ್ಗೆ ಕರೆ ತರಲಾಗುವುದು ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.