ADVERTISEMENT

ನಟ ಪುನೀತ್‌ ಕಟ್ಟಾ ಅಭಿಮಾನಿ ಗುಜ್ಜಲ್‌ ಆದರ್ಶ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 14:48 IST
Last Updated 2 ಜೂನ್ 2021, 14:48 IST
ನಟ ಪುನೀತ್‌ ರಾಜಕುಮಾರ್‌ ಜತೆಯಲ್ಲಿ ಗುಜ್ಜಲ್ ಆದರ್ಶ
ನಟ ಪುನೀತ್‌ ರಾಜಕುಮಾರ್‌ ಜತೆಯಲ್ಲಿ ಗುಜ್ಜಲ್ ಆದರ್ಶ   

ಹೊಸಪೇಟೆ (ವಿಜಯನಗರ): ಹುಟ್ಟಿನಿಂದಲೇ ದೇಹದ ಅಂಗಾಂಗಗಳು ಬೆಳೆಯದೇ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ನಗರದ ತಳವಾರಕೇರಿಯ ನಿವಾಸಿ, ನಟ ಪುನೀತ್‌ ರಾಜಕುಮಾರ ಕಟ್ಟಾ ಅಭಿಮಾನಿಯಾಗಿದ್ದ ಗುಜ್ಜಲ್‌ ಆದರ್ಶ (17) ಬುಧವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಆದರ್ಶ, ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಬುಧವಾರ ಮರಣ ಹೊಂದಿದರು. ಆದರ್ಶ ಅವರ ಅಭಿಮಾನಕ್ಕೆ ಮನಸೋತಿದ್ದ ಪುನೀತ್‌, ಹೋದ ವರ್ಷ ಅವರ ಮನೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.