ADVERTISEMENT

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್‌ ಕೋವಿಡ್‌–19ನಿಂದ ಸಂಪೂರ್ಣ ಗುಣಮುಖ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 7:04 IST
Last Updated 29 ಜುಲೈ 2020, 7:04 IST
ಐಶ್ವರ್ಯ ಅರ್ಜುನ್‌
ಐಶ್ವರ್ಯ ಅರ್ಜುನ್‌   

ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರ ಪುತ್ರಿಯಾದ ನಟಿ ಐಶ್ವರ್ಯ ಅರ್ಜುನ್‌ ಅವರು, ಕೋವಿಡ್‌–19ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ಅವರೇ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದೃಢಪಡಿಸಿದ್ದಾರೆ.

ಕಳೆದ ಜುಲೈ 20ರಂದು ಐಶ್ವರ್ಯ ಅವರಿಗೆ ಕೋವಿಡ್‌–19 ಸೋಂಕು ತಗುಲಿತ್ತು. ಈ ಬಗ್ಗೆ ಅವರೇ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದೃಢಪಡಿದ್ದರು. ನಾನು ನುರಿತ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಪಡೆಯುತ್ತಿರುವೆ. ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವವರು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಕೋರಿದ್ದರು.

ವೈದ್ಯರ ಸೂಚನೆ ಮೇರೆಗೆ ಕಳೆದ ಎರಡು ವಾರಗಳಿಂದಲೂ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದರು. ಕೋವಿಡ್‌–19ನಿಂದ ಚೇತರಿಸಿಕೊಂಡಿದ್ದರೂ ಇನ್ನೂ ಕೆಲವು ದಿನಗಳವರೆಗೆ ಅವರು ಮನೆಯಲ್ಲಿಯೇ ಪ್ರತ್ಯೇಕವಾಗಿಯೇ ಇರಲಿದ್ದಾರಂತೆ.

ADVERTISEMENT

‘ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ನಾನು ಆಭಾರಿ. ನಾನು ಒತ್ತಡದಿಂದ ಹೊರಬರಲು ನಿಮ್ಮೆಲ್ಲರ ಹಾರೈಕೆ ಸಹಕಾರಿಯಾಯಿತು. ದೇವರ ದಯೆಯಿಂದ ನಾನು ಗುಣಮುಖಳಾಗಿದ್ದೇನೆ. ಕೊರೊನಾ ದೀರ್ಘಕಾಲ ಇರುವುದಿಲ್ಲ. ಹಾಗೆಂದು ನಾವು ಆರೋಗ್ಯದ ಬಗ್ಗೆ ಮುಂಜಾಗ್ರತೆವಹಿಸಲು ಹಿಂದೇಟು ಹಾಕಬಾರದು. ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆ ಬಗ್ಗೆ ವಿಶೇಷ ಕಾಳಜಿವಹಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಎರಡು ವರ್ಷದ ಹಿಂದೆ ಕನ್ನಡದಲ್ಲಿ ತೆರೆಕಂಡ ‘ಪ್ರೇಮ ಬರಹ’ ಚಿತ್ರದ ಮೂಲಕ ಐಶ್ವರ್ಯ ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ಚಂದನ್‌ ಕುಮಾರ್‌ ನಾಯಕರಾಗಿದ್ದ, ಈ ಸಿನಿಮಾಕ್ಕೆ ಅರ್ಜುನ್‌ ಸರ್ಜಾ ಆ್ಯಕ್ಷನ್ ಕಟ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.