‘ಪ್ರಜಾವಾಣಿ’ಯ ದೀಪಾವಳಿಯ ವಿಶೇಷಾಂಕದ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ‘ಪಂಜರ’ ಕಥೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ವೆಬ್ ಸರಣಿಯಾಗಿ ನಿರ್ಮಿಸಲಿದ್ದಾರೆ. ಅಲ್ಲದೇ ಭಾನುವಾರ ಪುರವಣಿಯ ಮಾರ್ಚ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿದ್ದಅದೀಬ್ ಅವರ ಮತ್ತೊಂದು ಕಥೆ ‘ಹೊಸ ವರ್ಷದ ಮೊದಲನೆಯ ದಿನ’ವನ್ನು ವೆಬ್ ಸರಣಿಯಾಗಿ ನಿರ್ಮಿಸಲಿದ್ದಾರೆ.
‘ನನ್ನ ಎರಡು ಕಥೆಗಳನ್ನು ವೆಬ್ಸರಣಿಗೆ ಕಿರುಚಿತ್ರಗಳಾಗಿ ನಿರ್ಮಿಸಲು ಹಂಸಲೇಖ ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ತಂಡದ ಜತೆಗೆ ಕಿರುಚಿತ್ರಕ್ಕಾಗಿ ಕೆಲಸ ಮಾಡಲು ಆಹ್ವಾನ ನೀಡಿದ್ದಾರೆ’ ಎಂದುಕಥೆಗಾರ ಅದೀಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.