ಅನುಭಾವಿ ಶಿವಶರಣರ ಕಥೆ ಒಳಗೊಂಡ ‘ಅಲ್ಲಮಪ್ರಭು’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ.ಡಾ.ಸಂಜಯ್ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ ಅಭಿನಯಿಸಿದ ಹಾಡಿನ ಚಿತ್ರೀಕರಣದ ಮೂಲಕ ಮುಕ್ತಾಯವಾಯಿತು.
ಈ ಚಿತ್ರ ಕನ್ನಡ,ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ಮೂಡಿಬರಲಿದೆ ಎಂದು ನಿರ್ಮಾಪಕ, ಚಿತ್ರಕಥೆಗಾರ ಮಾಧವಾನಂದ ವೈ. ತಿಳಿಸಿದ್ದಾರೆ.ಮಹಾವೀರಪ್ರಭು ಈ ಚಿತ್ರದ ಸಹನಿರ್ಮಾಪಕರು.ಶರಣ್ ಗದ್ವಾಲ್ ನಿರ್ದೇಶನ ಮಾಡಿದ್ದಾರೆ.ಆರ್.ಗಿರಿ ಛಾಯಾಗ್ರಾಹಕರು, ಕುಮಾರ್ ಈಶ್ವರ್ ಸಂಗೀತ, ಬಿ.ಎಸ್.ಕೆಂಪರಾಜ್ ಸಂಕಲನ, ರಮೇಶ್ ಬಾಬು ವರ್ಣಾಲಂಕಾರ, ಬೆಳ್ಳಿ ಚುಕ್ಕಿ ವೀರೇಂದ್ರ ವಸ್ತ್ರಾಲಂಕಾರ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.