ADVERTISEMENT

‘ಸಲ್ಮಾನ್ ಖಾನ್‌ ಸಲಹೆ ಪಡೆಯದಿದ್ದರೆ ಮೂರ್ಖನಾಗುವೆ’

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 19:30 IST
Last Updated 29 ಅಕ್ಟೋಬರ್ 2018, 19:30 IST
ವಾರಿನಾ ಹುಸೇನ್ ಹಾಗೂ ಆಯೂಷ್ ಶರ್ಮಾ
ವಾರಿನಾ ಹುಸೇನ್ ಹಾಗೂ ಆಯೂಷ್ ಶರ್ಮಾ   

‘ಲವ್‌ಯಾತ್ರಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟವರು ನಟ ಆಯೂಷ್ ಶರ್ಮಾ. ನಟ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಅವರ ಪತಿಯೂ ಅದ ಆಯುಷ್‌ ಈಚೆಗೆ ಮುಂಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು.

ಪತಿಯ ಹುಟ್ಟುಹಬ್ಬದ ಅಂಗವಾಗಿ ಅರ್ಪಿತಾ ದೊಡ್ಡಮಟ್ಟದಲ್ಲಿಯೇ ಸಮಾರಂಭ ಆಯೋಜಿಸಿದ್ದರು. ಅರ್ಬಾಜ್ ಖಾನ್, ಶಿಲ್ಪಾಶೆಟ್ಟಿ, ಜಾಕ್ವೆಲಿನ್ ಫರ್ನಾಂಡಿಸ್, ಸೋನಾಕ್ಷಿ ಸಿಹ್ಹಾ, ಕೈರಾ ಅಡ್ವಾಣಿ, ಕರಣ್ ಜೋಹಾರ್ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮರು ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಮೈಕ್ ಹಿಡಿದ ಆಯೂಷ್, ‘ಚಿತ್ರಗಳ ಆಯ್ಕೆ ವಿಚಾರದಲ್ಲಿ ಭಾವ ಸಲ್ಮಾನ್ ಸಲಹೆ ಪಡೆಯದಿದ್ದರೆ ನನ್ನಂತ ಮುರ್ಖ ಇನ್ನೊಬ್ಬನಿರುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಸಲ್ಮಾನ್ ನನಗೆ ತಂದೆಯ ಸಮಾನರು. ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ಭಾಗಿಯಾಗಿರುವುದು ತುಂಬಾನೇ ವಿಶೇಷವಾದದ್ದು. ಅವರ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತಿದ್ದೇನೆ.ಮುಂದಿನ ಚಿತ್ರಗಳ ಬಗ್ಗೆ ಈಗಾಗಲೇ ಕೆಲ ಕಥೆಗಳನ್ನು ಆಲಿಸಿದ್ದು, ತ್ವರಿತವಾಗಿ ಆ ಬಗ್ಗೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

‘ಇನ್ನು ಈವರ್ಷದ ಅತಿದೊಡ್ಡ ಉಡುಗೊರೆ ಎಂದರೆ, ಅದು ನನ್ನ ಮಗ’ ಎಂದಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ಸ್ ಸಂಸ್ಥೆಯು ಲವ್‌ಯಾತ್ರಿ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ತಂಗಿಯ ಪತಿಯನ್ನು ಸಿನಿಮಾಗೆ ಪರಿಚಯಿಸುವ ಸಲುವಾಗಿ ಸಲ್ಮಾನ್ ಖಾನ್ ಅವರೇ ಬಂಡವಾಳ ಹೂಡಿದ್ದರು.ವಾರಿನಾ ಹುಸೇನ್ ನಾಯಕಿಯಾಗಿ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.