ADVERTISEMENT

ಝೀರೊ ಟು ಹೀರೊ : ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಶುಭ ಕೋರಿದ ಕಾವ್ಯ ಶೈವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2026, 7:18 IST
Last Updated 20 ಜನವರಿ 2026, 7:18 IST
<div class="paragraphs"><p>ಕೃಪೆ:&nbsp;<a href="https://kn.wikipedia.org/wiki/%E0%B2%87%E0%B2%A8%E0%B3%8D%E0%B2%B8%E0%B3%8D%E0%B2%9F%E0%B2%BE%E0%B2%97%E0%B3%8D%E0%B2%B0%E0%B2%BE%E0%B2%AE%E0%B3%8D">ಇನ್ಸ್ಟಾಗ್ರಾಮ್</a></p><p><a href="https://kn.wikipedia.org/wiki/%E0%B2%87%E0%B2%A8%E0%B3%8D%E0%B2%B8%E0%B3%8D%E0%B2%9F%E0%B2%BE%E0%B2%97%E0%B3%8D%E0%B2%B0%E0%B2%BE%E0%B2%AE%E0%B3%8D"><br></a></p></div><div class="paragraphs"></div>

‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂದ ಬರೆದುಕೊಂಡ  ಬಿಗ್‌ಬಾಸ್-12ನೇ ಆವೃತ್ತಿಯ 3ನೇ ರನ್ನರ್ ಆಪ್ ಕಾವ್ಯ ಶೈವ ಅವರು ಬಿಗ್‌ಬಾಸ್ ವಿಜೇತ ಗಿಲ್ಲಿ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಶುಭ ಕೋರಿದ್ದಾರೆ.

ನಟ, ನಿರೂಪಕ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತರಾಗಿ ಗಿಲ್ಲಿ ನಟ ಅವರು ಹೊರಹೊಮ್ಮಿದ್ದಾರೆ.

ADVERTISEMENT

‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ .. ಹೇ ಗಿಲ್ಲಿ  ಶುಭವಾಗಲಿ ನಿನಗೆ.. ವಿಜೇತ ಪಟ್ಟಕ್ಕೆ ನೀನೇ ಅರ್ಹ. ಝೀರೊ ಟು ಹೀರೊ ಹೀರೊ ಆಗಿದ್ದೀಯಾ.. ಆದಷ್ಟು ಬೇಗ ನಿನಗೆ ಆಕ್ಷನ್ ಕಟ್ ಹೇಳುವಂತಾಗಲಿ.. ಇನ್ನಷ್ಟು ಒಳ್ಳೆಯದಾಗಲಿ ಎಂದು ಬರೆದುಕೊಂಡು ಶುಭ ಹಾರೈಸಿದ್ದಾರೆ.

ಇನ್ನೂ, ಬಿಗ್‌ಬಾಸ್-12ನೇ ಆವೃತ್ತಿಯ 2ನೇ ರನ್ನಪ್ ಆಪ್ ಆಗಿರುವ ಅಶ್ವಿನಿ ಗೌಡ ಅವರ ‘ಬಡತನದ ಮುಖವಾಡ ಗೆದ್ದಿದ್ದೆ' ಎಂಬ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಗ್‌ಬಾಸ್-12ನೇ ಆವೃತ್ತಿಯ ‌ವಿಜೇತರಾಗಿರುವ ಗಿಲ್ಲಿ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಟ ಶಿವರಾಜ್ ಕುಮಾರ್, ರೂಪೇಶ್ ಶೆಟ್ಟಿ ಸೇರಿ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಶುಭಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.