ADVERTISEMENT

ಒಂದೇ ಫ್ರೇಮ್‌ನಲ್ಲಿ ಚಿರಂಜೀವಿ– ಪವನ್ ಕಲ್ಯಾಣ್; ಇದು ‘ಸ್ಮರಣೀಯ ದಿನ’ ಎಂದ ಚರಣ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2021, 8:27 IST
Last Updated 24 ಆಗಸ್ಟ್ 2021, 8:27 IST
ತೆಲುಗು ಮೆಗಾಸ್ಟಾರ್‌ ಚಿರಂಜೀವಿ ಕುಟುಂಬ (ಇನ್‌ಸ್ಟಾಗ್ರಾಂ ಚಿತ್ರ)
ತೆಲುಗು ಮೆಗಾಸ್ಟಾರ್‌ ಚಿರಂಜೀವಿ ಕುಟುಂಬ (ಇನ್‌ಸ್ಟಾಗ್ರಾಂ ಚಿತ್ರ)   

ಹೈದರಾಬಾದ್‌: ತೆಲುಗು ಮೆಗಾಸ್ಟಾರ್‌ ಚಿರಂಜೀವಿ, ಪವನ್‌ ಕಲ್ಯಾಣ್‌, ನಾಗಬಾಬು ಸೇರಿದಂತೆ ಕೊನಿಡೆಲಾ ಕುಟುಂಬದ ನಟರೆಲ್ಲರೂ ಸೇರಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಆ.22 ರಂದು ಚಿರಂಜೀವಿ ಅವರ 66ನೇ ಹುಟ್ಟುಹಬ್ಬವನ್ನು (ಆಗಸ್ಟ್ 22) ಸಂಭ್ರಮದಿಂದ ಆಚರಿಸಲಾಗಿದೆ. ಹಾಗಾಗಿ ಸಹೋದರರೆಲ್ಲರೂ ಒಟ್ಟಿಗೆ ಸೇರಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದು, ಇದೀಗ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಕೋವಿಡ್‌ ನಿಯಮಗಳು ಜಾರಿಯಲ್ಲಿರುವ ಕಾರಣಕ್ಕೆ ಚಿರಂಜೀವಿ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಇಡೀ ದಿನ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆದಿದ್ದಾರೆ.

ಸಂಭ್ರಮದಲ್ಲಿ ನಾಗಬಾಬು, ಪವನ್‌ ಕಲ್ಯಾಣ್‌, ರಾಮ್‌ ಚರಣ್‌, ಯುವ ನಟರಾದ ವರುಣ್ ತೇಜ್, ಸಾಯಿ ಧರ್ಮ ತೇಜ್ ಮತ್ತು ಪಂಜಾ ವೈಷ್ಣವ್‌ ತೇಜ್ ಭಾಗವಹಿಸಿದ್ದರು.

ADVERTISEMENT

ಸದ್ಯ ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಾಮ್‌ ಚರಣ್‌ ನಿರ್ಮಾಣ ಮಾಡಿದ್ದು, ಮೇ 13 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲ್ಪಟ್ಟಿದೆ.

ರಾಮ್‌ ಚರಣ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಅಭಿನಯದ ‘ಆರ್‌ಆರ್‌ಆರ್‌’(ರೌದ್ರಂ ರಣಂ ರುಧಿರಂ) ಚಿತ್ರವು 2022 ಈದ್‌ ಸಂದರ್ಭದಲ್ಲಿ ಬಿಡುಗಡೆಯಾಗಬಹುದು ಹೇಳಲಾಗಿದೆ. ಈ ಚಿತ್ರವನ್ನು ಎಸ್‌.ಎಸ್‌.ರಾಜಮೌಳಿ ನಿರ್ದೇಶಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.