ADVERTISEMENT

ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ: ಮಂಗಳೂರು ಬಾಂಬ್‌ ಆರೋಪಿ ಹೆಸರಲ್ಲಿ ಸಿನಿಮಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 15:31 IST
Last Updated 23 ಜನವರಿ 2020, 15:31 IST
ಮಂಗಳೂರು ಬಾಂಬ್‌ ಪ್ರಕರಣದ ಆರೋಪಿ ಆದಿತ್ಯ ರಾವ್‌ ಹಾಗೂ ನಿರ್ಮಾಪಕ ತುಳಸಿ ರಾಮ್
ಮಂಗಳೂರು ಬಾಂಬ್‌ ಪ್ರಕರಣದ ಆರೋಪಿ ಆದಿತ್ಯ ರಾವ್‌ ಹಾಗೂ ನಿರ್ಮಾಪಕ ತುಳಸಿ ರಾಮ್   

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ, ಪೊಲೀಸರಿಗೆ ಶರಣಾದ ಆದಿತ್ಯ ರಾವ್‌ನ ಕಥೆ ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕ ತುಳಸಿ ರಾಮ್ ಮುಂದಾಗಿದ್ದಾರೆ.

‘ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ’ ಎಂಬ ಶೀರ್ಷಿಕೆಯನ್ನು ತುಳಸಿ ರಾಮ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ನೋಂದಣಿ ಮಾಡಿಸಿದ್ದಾರೆ.

‘ಈ ಚಿತ್ರದ ಚಿತ್ರೀಕರಣವು ಇನ್ನು ಎರಡರಿಂದ ಮೂರು ತಿಂಗಳಲ್ಲಿ ಆರಂಭವಾಗುತ್ತದೆ. ಬಿ.ಆರ್. ಕೇಶವ್ ಅವರು ಚಿತ್ರದ ನಿರ್ದೇಶನ ಮಾಡಲಿದ್ದಾರೆ’ ಎಂದು ತುಳಸಿ ಅವರು ತಿಳಿಸಿದರು.

ADVERTISEMENT

ಆದಿತ್ಯ ಅವರ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಹಾಗೂ ಪ್ರಸಾರವಾಗಿರುವ ವರದಿ, ಕಾರ್ಯಕ್ರಮಗಳನ್ನು ಆಧರಿಸಿ ಕಥೆ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.