ADVERTISEMENT

‘ಕಡಲ ತೀರದ ಭಾರ್ಗವ’ ಕಾರಂತರಲ್ಲ ಮತ್ಯಾರು?

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 7:15 IST
Last Updated 12 ಅಕ್ಟೋಬರ್ 2021, 7:15 IST
ಭರತ್‌ ಗೌಡ, ಶ್ರುತಿ ಪ್ರಕಾಶ್‌
ಭರತ್‌ ಗೌಡ, ಶ್ರುತಿ ಪ್ರಕಾಶ್‌   

ಕಡಲತೀರದ ಭಾರ್ಗ‌ವ... ಇದು ಡಾ.ಕೆ.ಶಿವರಾಮ ಕಾರಂತ ಅವರಿಗೆ ಜನರಿಟ್ಟ ಅಭಿಮಾನದ ಹೆಸರು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸಿದ್ಧವಾಗಿದೆ. ಹಾಗೆಂದು ಇದೇನು ಶಿವರಾಮ ಕಾರಂತರ ಚಿತ್ರವಲ್ಲ. ಚಿತ್ರದ ನಾಯಕನ ಹೆಸರು ಭಾರ್ಗವ ಎಂದು. ಅವನು ಕಡಲ ತೀರದ ನಿವಾಸಿ ಎಂದಿದೆ ಚಿತ್ರತಂಡ.

ಏವಕಲ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ವರುಣ್ ರಾಜು ಪಟೇಲ್ ಹಾಗೂ ಭರತ್‌ಗೌಡ ಈ ಚಿತ್ರದ ನಿರ್ಮಾಪಕರು. ವಿಜಯಂ ವಜ್ರ ವೆಂಚರ್ಸ್ ಸಹ ನಿರ್ಮಾಣ ಈ ಚಿತ್ರಕ್ಕಿದೆ. ಪೂರ್ವಭಾವಿಯಾಗಿ ಅ. 18ರಂದು ಟೀಸರ್‌ ಬಿಡುಗಡೆ ಆಗಲಿದೆ.

ನಿರ್ಮಾಪಕರಾದ ಭರತ್ ಗೌಡ ಹಾಗೂ ವರುಣ್ ರಾಜು ಪಟೇಲ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಶ್ರುತಿ ಪ್ರಕಾಶ್ ಈ ಚಿತ್ರದ ನಾಯಕಿ. ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಉಡುಪಿ, ಮುರುಡೇಶ್ವರ ಕಡಲತೀರಗಳಲ್ಲಿ ಚಿತ್ರೀಕರಣ ನಡೆದಿದೆ.

ADVERTISEMENT

ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ. ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ, ಉಮೇಶ್ ಭೋಸಗಿ ಅವರ ಸಂಕಲನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.