ADVERTISEMENT

ಮುಕ್ತಾಯದ ಹಂತದಲ್ಲಿ ಕರಟಕ ದಮನಕ ಸಿನಿಮಾ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2023, 19:30 IST
Last Updated 23 ಆಗಸ್ಟ್ 2023, 19:30 IST
ಪ್ರಭುದೇವ, ಶಿವರಾಜ ಕುಮಾರ್‌
ಪ್ರಭುದೇವ, ಶಿವರಾಜ ಕುಮಾರ್‌   

ಶಿವರಾಜ ಕುಮಾರ್‌ ಹಾಗೂ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿರುವ ‘ಕರಟಕ ದಮನಕ’ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ.

‘ಸಿನಿಮಾ ಶುರುವಾಗಿ ವರ್ಷವಾಗಿದೆ. ಚಿತ್ರೀಕರಣ ಶೇ. 90ರಷ್ಟು ಮುಕ್ತಾಯಗೊಂಡಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಶಿವಣ್ಣ ಅವರಿಂದ ಇಡೀ ತಂಡ ಎನರ್ಜಿ ಕಲಿತಿದೆ. ಅವರ ಎನರ್ಜಿಗೊಂದು ದೊಡ್ಡ ನಮಸ್ಕಾರ. ಪ್ರಭುದೇವ ತುಂಬ ಕಡಿಮೆ ಮಾತಿನಲ್ಲಿ ಎಲ್ಲರಿಗೂ ಸ್ನೇಹಿತರಾಗಬಲ್ಲವರು. ಸಿನಿಮಾ ಮುಗಿಯುತ್ತಿದೆ ಎಂದರೂ ಗೀತಾ ಶಿವರಾಜ ಕುಮಾರ್‌ ನಂಬುತ್ತಿಲ್ಲ. ಗೀತಕ್ಕನ ಮನೆಯ ಆತಿಥ್ಯ, ರಾಕ್‌ಲೈನ್‌ ವೆಂಕಟೇಶ್‌ ಅವರ ಮನೆಯ ರಸಂ ರುಚಿಯನ್ನೊಮ್ಮೆ ನೋಡಿ’ ಎನ್ನುತ್ತ ತಮ್ಮದೇ ಧಾಟಿಯಲ್ಲಿ ಎಲ್ಲರನ್ನೂ ನಗಿಸಿದರು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌.

ಯೋಗರಾಜ್‌ ಭಟ್‌ ಹಾಗೂ ಚಿತ್ರದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಪ್ರಿಯಾ ಆನಂದ್‌, ನಿಶ್ವಿಕಾ ನಾಯ್ಡು ಚಿತ್ರದ ನಾಯಕಿಯರು.

ADVERTISEMENT

‘ಚಿತ್ರದಲ್ಲಿ ಏಳು ಹಾಡುಗಳಿದ್ದು, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅದ್ಬುತವಾಗಿ ಎಲ್ಲವನ್ನೂ ಜೋಡಿಸಿದ್ದಾರೆ. ಈ ಸಿನಿಮಾದ ಇನ್ನೊಬ್ಬ ನಾಯಕ ನಟ ಅವರು’ ಎಂದರು ಯೋಗರಾಜ್‌ ಭಟ್‌.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.