ಆಸ್ಕರ್ ಕೃಷ್ಣ ನಟನೆ, ನಿರ್ದೇಶನದಲ್ಲಿ ’ಕೃತ್ಯ’ ಸೆಟ್ಟೇರಿದೆ. ಇತ್ತೀಚೆಗೆ ನಟ ಶ್ರೀಮುರಳಿ ಅವರು ಈ ಚಿತ್ರದ ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಸಾಫ್ಟ್ವೇರ್ ಉದ್ಯೋಗಿ ಗೌತಮ್ರಾಮಚಂದ್ರ ಅವರು ಈ ಚಿತ್ರದ ಸಹ ನಿರ್ಮಾಪಕರು. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರ ಜೊತೆ ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರಂತೆ. ಮುಂದೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುವ ಬಯಕೆ ಹೊಂದಿದ್ದಾರೆ.
ಟೈಟಲ್ ಪೋಸ್ಟರ್ ಅನಾವರಣ ಸಂದರ್ಭದಲ್ಲಿ ಹಿರಿಯ ನಿರ್ಮಾಪಕರಾದ ಬಾ.ಮ.ಹರೀಶ್, ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ಬಣಕಾರ್, ಬಾ.ಮ.ಗಿರೀಶ್, ನರಸಿಂಹರಾಜು, ಡಾ.ಸುನಿಲ್ಕುಮಾರ್, ವಿಜಯ್ಕುಮಾರ್ಸಿಂಹ, ಟಿಪ್ಪುವರ್ಧನ್ ಇದ್ದರು. ನಾಯಕಿ, ತಾರಾಗಣ ಮತ್ತು ತಂತ್ರಜ್ಞರ ವಿವರಗಳನ್ನು ಮಹೂರ್ತ ದಿನದಂದು ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.