ಬೆಂಗಳೂರು: ಬಹು ತಾರಾಗಣದ, ಬಹು ನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ ಆಗಸ್ಟ್ 9ಕ್ಕೆ ಬಿಡುಗಡೆ ಆಗುವುದು ಖಚಿತ ಎಂದು ನಿರ್ದೇಶಕ ನಾಗಣ್ಣ ತಿಳಿಸಿದರು.
ಈ ಚಿತ್ರ ಆಗಸ್ಟ್ 2ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ‘ಚಿತ್ರವು ಈಗಿನ ತಲೆಮಾರಿನವರಿಗೆ ಹತ್ತಿರವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ ನಾಗಣ್ಣ, ‘ಚಿತ್ರವನ್ನು ತ್ರೀಡಿ ರೂಪದಲ್ಲಿ ನೋಡಿದರೆ ಸಿಗುವ ಅನುಭವ ಅದ್ಭುತ’ ಎಂದರು.
ಯಾವುದೇ ಪಾತ್ರಕ್ಕೆ ಚ್ಯುತಿ ಬಾರದಂತೆ ಸಿನಿಮಾ ಮಾಡಲಾಗಿದೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.