ADVERTISEMENT

‘ಪೈಲ್ವಾನ್‌’ಗೆ ಶುಭ ಕೋರಿದ ಕನ್ನಡ ಚಿತ್ರರಂಗ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 7:08 IST
Last Updated 12 ಸೆಪ್ಟೆಂಬರ್ 2019, 7:08 IST
   

ನಿರ್ದೇಶಕ ಕೃಷ್ಣ ಮತ್ತು ನಟ ಸುದೀಪ್‌ ಕಾಂಬಿನೇಷನ್‌ನಡಿ ಮೂಡಿಬಂದಿರುವ ‘ಪೈಲ್ವಾನ್‌’ ಚಿತ್ರಕ್ಕೆ ಚಿತ್ರರಂಗದ ಹಲವು ನಟರು ಮತ್ತು ನಿರ್ದೇಶಕರು ಶುಭ ಕೋರಿದ್ದಾರೆ.

‘ಪೈಲ್ವಾನ್ ಚಿತ್ರರಂಗಕ್ಕೆ ಒಳ್ಳೆಯದಾಗಲಿ. ಚಿತ್ರ ಸೂಪರ್‌ ಹಿಟ್‌ ಆಗಲಿ. 5 ಭಾಷೆಯಲ್ಲಿಯೂ ಪೈಲ್ವಾನ್ ಗೆಲುವು ಸಾಧಿಸಲಿ’ ಎಂದು ‘ಗೋಲ್ಡನ್‌ ಸ್ಟಾರ್’ಗಣೇಶ್‌ ಶುಭ ಹಾರೈಸಿದ್ದಾರೆ.

ನಟ ಜಗ್ಗೇಶ್‌ ಅವರು, ‘ಪೈಲ್ವಾನ್‌ ಕನ್ನಡಿಗರ ಹೃದಯ ಗೆಲ್ಲಲಿ.ಬನ್ನೊರಲ್ಲಿ ‘ತೋತಾಪುರಿ’ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿಗೆ ಹೋಗುವಾಗ ದಾರಿಯಲ್ಲಿ ಕಂಡ ಚಿತ್ರಮಂದಿರದ ಮುಂದೆ ಹಾದು ಹೋಗುವಾಗ ಖುಷಿಯಾಯಿತು.ಜನರ ಪ್ರೀತಿ ಕಂಡು... ಶುಭಮಸ್ತು’ ಎಂದಿದ್ದಾರೆ.

ADVERTISEMENT

ನಟ ಶರಣ್‌ ಅವರು, ‘ಪೈಲ್ವಾನ್‌ ಚಿತ್ರ ಒಳ್ಳೆಯ ಯಶಸ್ಸುಗಳಿಸುವ ಮೂಲಕ ಸುದೀಪ್‌ ಮತ್ತು ಚಿತ್ರತಂಡಕ್ಕೆ ಶುಭವಾಗಲಿ’ ಎಂದು ಹೇಳಿದ್ದಾರೆ.

‘Pailwaan ಚಿತ್ರವು ಉನ್ನತ ಯಶಸ್ಸು ಕಾಣಲಿ ಹಾಗೂ ನಮ್ಮ ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ತಲುಪಲಿ’ ಎಂದು ನಿರ್ದೇಶಕಪ್ರೇಮ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.