ಮೆದುಳಿನ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ನಟ ರಾಹುಲ್ ರಾಯ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನವೆಂಬರ್ನಲ್ಲಿ ರಾಯ್ ಅವರು ‘ಎಲ್ಎಸಿ– ಲಿವ್ ದ ಬ್ಯಾಟಲ್ ಇನ್ ಕಾರ್ಗಿಲ್’ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.
‘ಪೂರ್ಣವಾಗಿ ಚೇತರಿಸಿಕೊಳ್ಳುವ ಪ್ರಯಾಣ ಇನ್ನೂ ದೀರ್ಘವಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ನನ್ನೊಂದಿಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು’ ಎಂದು ರಾಯ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಕಾರ್ಗಿಲ್ನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಅವರು ಅಸ್ವಸ್ಥಗೊಂಡಿದ್ದರು. ಅಲ್ಲಿಂದ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಮೊಕ್ಹಾರ್ಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಪಾರ್ಶ್ವವಾಯುವಿನಿಂದಾಗಿ ಮಾತನಾಡಲು ಅವರಿಗೆ ಅಸಾಧ್ಯವಾಗಿತ್ತು. ಬಾಯಿಯ ಸ್ನಾಯು ಚಲನೆಯನ್ನು ಅವರು ಕಳೆದುಕೊಂಡಿದ್ದರು.
ಸಂಕಷ್ಟದಲ್ಲಿ ಜತೆಗಿದ್ದ ಹಲವರನ್ನು ಸ್ಮರಿಸಿರುವ ರಾಯ್, ‘ನನ್ನ ಸಹೋದರ ರೋಹಿತ್, ಸಹೋದರಿ ಮತ್ತು ಗೆಳತಿ ಪ್ರಿಯಾಂಕಾ, ಸೋದರ ಮಾವ ರೋಮರ್, ನನ್ನ ಸ್ನೇಹಿತರಾದ ಅದಿತಿ ಗೋವಿಟ್ರಿಕರ್, ಡಾ.ಹುಜ್, ಅಶ್ವಿನಿ ಕುಮಾರ್, ಅಜರ್, ಶ್ರುತಿ ದ್ವಿವೇದಿ, ಸುಚಿತ್ರಾ ಪಿಳ್ಳೈ ಮತ್ತು ನನಗಾಗಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.