ADVERTISEMENT

ಮಹಿಳೆಯರು ದೇಹಕ್ಕೆ ಗೋದ್ರೆಜ್ ಬೀಗ ಹಾಕಿಕೊಂಡು ಹೊರಗೆ ಹೋಗಿ: ರಾಖಿ ಸಾವಂತ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 11:41 IST
Last Updated 26 ಅಕ್ಟೋಬರ್ 2018, 11:41 IST
   

ಮುಂಬೈ: ತನುಶ್ರೀ ದತ್ತಾ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಳೆ ಎಂದು ಆರೋಪಿಸಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ಮಹಿಳೆಯರು ತಮ್ಮ ಮಾನ ರಕ್ಷಣೆಗಾಗಿ ಏನು ಮಾಡಬೇಕೆಂಬ ಸಲಹೆ ನೀಡಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿರುವ ರಾಖಿ ಸಾವಂತ್ ಹೆಣ್ಣು ಮಕ್ಕಳು ಹೊರಹೋಗುವಾಗ ಮಾನ ರಕ್ಷಣೆಗಾಗಿ ದೇಹಕ್ಕೆ ಗೋದ್ರೆಜ್ ಬೀಗ ಹಾಕಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

ತಾನು ವಿಜ್ಞಾನಿ ರಾಖಿ ಸಾವಂತ್ ಎಂದು ಹೇಳಿಕೊಂಡಿರುವ ಈಕೆ, ಲೈಂಗಿಕ ದೌರ್ಜನ್ಯದಿಂದ ಪಾರಾಗಲು ತಾನು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದೇನೆ.ಹೆಣ್ಣು ಮಕ್ಕಳು ಈ ರೀತಿ ದೇಹದ ಅಂಗಗಳಿಗೆ ಗೋದ್ರೆಜ್ ಬೀಗ ಹಾಕಿಕೊಂಡರೆ ಲೈಂಗಿಕ ದೌರ್ಜನ್ಯದಿಂದ ಪಾರಾಗಬಹುದು ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.