1980ರ ದಶಕದಲ್ಲಿ ಅಂಬರೀಷ್, ಅಂಬಿಕಾ ಅಭಿನಯದಲ್ಲಿ ‘ಚಕ್ರವ್ಯೂಹ’ ಚಿತ್ರವು ಭರ್ಜರಿ ದಾಖಲೆ ಮಾಡಿತ್ತು. ಈಗ ಹೊಸಬರೇ ಸೇರಿಕೊಂಡು ‘ರಣವ್ಯೂಹ’ ಸಿನಿಮಾವನ್ನು ಸಿದ್ಧಪಡಿಸುತ್ತಿದ್ದಾರೆ.
ಹಾಗಂತ ಆ ಚಿತ್ರಕ್ಕೂ ಇದಕ್ಕೂ ಸಂಬಂಧವಿಲ್ಲ. ಶ್ರೀಶಿರಡಿ ಸಾಯಿ ಮೂವೀಸ್ ಮತ್ತು ಮೈ ಮೂವಿ ಮೇಕರ್ ಪ್ರೊಡಕ್ಷನ್ಸ್ದಲ್ಲಿ ಎಂ.ಜಿ.ವೇಣುಕುಮಾರ್ ಹಾಗೂ ರೋಹನ್ ಪ್ರದೀಪ್ ಮೆಂಡೋನ್ಸಾ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಎಸ್.ಶಂಕರ್ ಚಿತ್ರದ ನಿರ್ದೇಶಕರು.
ಶುಕ್ರವಾರ ಮಹೂರ್ತ ಶ್ರೀ ಲಕ್ಷೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.
ಆಘಾತಕಾರಿ ಸಮಾಜ ವಿದ್ರೋಹಕ ಚಟುವಟಿಕೆಗಳ ಮೇಲೆ ಸಿನಿಮಾ ಮಾಡಲಾಗುತ್ತಿದ್ದು, ವಿನಯ್ಕುಮಾರ್ ಕತೆಯನ್ನು ಬರೆದಿದ್ದಾರೆ.
ಮಜಾಭಾರತ ಖ್ಯಾತಿಯ ಅವಿನಾಶ್ಚಕ್ರವರ್ತಿ, ಬಿಗ್ ಬಾಸ್ ಸ್ಪರ್ಧಿ ಸೋನುಪಾಟೀಲ್. ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಯತಿರಾಜ್, ಐಪಿಎಸ್ ಅಧಿಕಾರಣಿಯಾಗಿ ಸ್ಮಿತಾ ವೇಣುಗೋಪಾಲ್, ಸ್ನೇಹಿತನಾಗಿ ಅಕ್ಷತ್, ಅವಿನ್, ವಿಭಿನ್ನ ಖಳನಾಯಕನಾಗಿ ರಾಜಪ್ರತೀಕ್, ಶಿವಾನಿ, ಆನಂದ್, ರವಿ, ಚಿಣ್ಣರುಗಳಾದ ಯುವರಾಜ್, ಪ್ರಜೋತ್ಆಕರ್ಷ್ ಮತ್ತು ಚೈತನ್ಯ ಮುಂತಾದವರ ನಟನೆ ಇದೆ.
ಸಂಗೀತ ಲಾಯ್ ವ್ಯಾಲೆಂಟೇನ್, ಛಾಯಾಗ್ರಹಣ ಕೃಷ್ಣನಾಯ್ಕರ್, ಸಹ ನಿರ್ದೇಶಕರಾಗಿ ಹರಿಪ್ರಾಣ, ರಾಮು ನವೀನ್ ಇದ್ದಾರೆ. ಅವರದಾಗಿದೆ. ಮೊದಲನೇ ಹಂತದಲ್ಲಿ ದೇವನಹಳ್ಳಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ,ನಂದಿಬೆಟ್ಟ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.