ADVERTISEMENT

ಗಾಯಕ ಎಸ್‌ಪಿಬಿ ಆರೋಗ್ಯದ ಬಗ್ಗೆ‌ ವಿಡಿಯೊ ಸಂದೇಶ‌ ನೀಡಿದ ಪುತ್ರ ಚರಣ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 18:18 IST
Last Updated 15 ಆಗಸ್ಟ್ 2020, 18:18 IST
ಗಾಯಕ ಎಸ್.ಪಿ.‌ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ಅವರ ಪುತ್ರ ಎಸ್.ಪಿ. ಚರಣ್ ಮಾತನಾಡಿದರು.
ಗಾಯಕ ಎಸ್.ಪಿ.‌ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ಅವರ ಪುತ್ರ ಎಸ್.ಪಿ. ಚರಣ್ ಮಾತನಾಡಿದರು.   

ಕೋವಿಡ್ -19 ಸೋಂಕು ತಗುಲಿ ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ಗೆ ದಾಖಲಾಗಿರುವ ಗಾಯಕ ಎಸ್.ಪಿ.‌ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ಅವರ ಪುತ್ರ ಎಸ್.ಪಿ. ಚರಣ್ ವಿಡಿಯೊ‌ ಸಂದೇಶ ‌ನೀಡಿದ್ದು, ‘ವೆಂಟಿಲೇಟರ್ ನಲ್ಲಿ ಅಪ್ಪ ವೈದ್ಯರ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ’ಎಂದು ತಿಳಿಸಿದ್ದಾರೆ.

ಅವರು‌‌ ವಿಡಿಯೊ‌ದಲ್ಲಿ ನೀಡಿರುವ ಸಂದೇಶದ ವಿವರ ಇಂತಿದೆ:

‘ಎಲ್ಲರಿಗೂ ನಮಸ್ಕಾರ. ನಿನ್ನೆ ಅಪ್ಪನ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಹಾಗಾಗಿ ವೆಂಟಿಲೇಟರ್ ಅಳವಡಿಸಲಾಗಿತ್ತು. ಬೆಳಿಗ್ಗೆ ಸಾಕಷ್ಟು ಮೊಬೈಲ್ ಕರೆಗಳು‌‌ ಬಂದಿದ್ದವು. ಆದರೆ, ಉತ್ತರಿಸಲು ಸಾಧ್ಯವಾಗಿರಲಿಲ್ಲ. ಅಪ್ಪನ ಆರೋಗ್ಯ ಸ್ಥಿರವಾಗಿದೆ. ವೈದ್ಯರು‌‌ ಕ್ರಿಟಿಕಲ್ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಅವರ ಶ್ವಾಸಕೋಶ ನಿನ್ನೆಗಿಂತಲೂ ಇಂದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಪ್ಪ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಅದಕ್ಕೆ ಸಾಕಷ್ಟು‌ ಸಮಯ ಬೇಕು. ಇದು ಒಂದೆರಡು‌ ದಿನಗಳಲ್ಲಿ ಆಗುವುದಿಲ್ಲ. ನಿಧಾನವಾಗಿ ಅವರು ಚೇತರಿಸಿಕೊಳ್ಳುತ್ತಾರೆ ಎಂಬ ‌ವಿಶ್ವಾಸ ನಮಗಿದೆ. ನಿಮ್ಮೆಲ್ಲರ‌ ಪ್ರಾರ್ಥನೆ ಅವರ ಆರೋಗ್ಯಕ್ಕೆ ಶ್ರೀರಕ್ಷೆಯಾಗಲಿದೆ’‌‌ ಎಂದು ತಿಳಿಸಿದ್ದಾರೆ.

ADVERTISEMENT

ಕೋವಿಡ್ ಸೋಂಕು ಇರುವುದು ದೃಢಪಟ್ಟ‌ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 5 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.