ADVERTISEMENT

Tollywood: ಚಿರಂಜೀವಿ ಭೇಟಿಯಾಗಲು 600 ಕಿ.ಮೀ ಸೈಕಲ್‌ ತುಳಿದು ಬಂದ ಅಭಿಮಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2021, 10:03 IST
Last Updated 28 ಆಗಸ್ಟ್ 2021, 10:03 IST
ಚಿರಂಜೀವಿ
ಚಿರಂಜೀವಿ   

ಹೈದರಾಬಾದ್‌: ನೆಚ್ಚಿನ ನಟ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾಗಲು ಅಭಿಮಾನಿಯೊಬ್ಬರು 600 ಕಿ.ಮೀ ಸೈಕಲ್ ತುಳಿದುಕೊಂಡು ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಚಿರಂಜೀವಿ ಅವರು ಇದೇ ಆಗಸ್ಟ್‌ 22 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಟನಿಗೆ ಶುಭ ಹಾರೈಸಲು ಚಿತ್ತೂರು ಜಿಲ್ಲೆಯವರಾದ ಈಶ್ವರಯ್ಯ ತಿರುಪತಿಯಿಂದ ಹೊರಟು 12 ದಿನಗಳ ಕಾಲ ಸೈಕಲ್‌ ತುಳಿದು ಹೈದರಾಬಾದ್‌ ತಲುಪಿದ್ದಾರೆ. ಸದ್ಯ ಈಶ್ವರಯ್ಯ ಅವರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಈ ಹಿಂದೆ ನಟ ರಾಮ್‌ಚರಣ್ ಅವರನ್ನು ಭೇಟಿಯಾಗಲು ನಾಲ್ವರು ಯುವಕರು 231 ಕಿ.ಮೀ ನಡೆದುಕೊಂಡು ಹೈದರಾಬಾದ್‌ಗೆ ಬಂದಿದ್ದರು.

ADVERTISEMENT

ಸದ್ಯ ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಾಮ್‌ ಚರಣ್‌ ನಿರ್ಮಾಣ ಮಾಡಿದ್ದು, ಮೇ 13 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲ್ಪಟ್ಟಿದೆ.

ರಾಮ್‌ ಚರಣ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಅಭಿನಯದ ‘ಆರ್‌ಆರ್‌ಆರ್‌’(ರೌದ್ರಂ ರಣಂ ರುಧಿರಂ) ಚಿತ್ರವು 2022 ಈದ್‌ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರವನ್ನು ಎಸ್‌.ಎಸ್‌.ರಾಜಮೌಳಿ ನಿರ್ದೇಶಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.