ಖಡ್ಗದಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿ ವಿವಾದಕ್ಕೊಳಗಾಗಿದ್ದ ತಮಿಳುನಟ ವಿಜಯ್ ಸೇತುಪತಿ ಬೇಷರತ್ ಆಗಿ ಕ್ಷಮೆಯಾಚಿಸಿದ್ದಾರೆ. ಸೇತುಪತಿ ಅವರು ಖಡ್ಗದಿಂದ ಕೇಕ್ ಕತ್ತರಿಸಿದ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಪೊಲೀಸರೂ ಕ್ರಮ ಕೈಗೊಳ್ಳಲು ಮುಂದಾಗಿದ್ದರು.
ಪೊನ್ ರಾಮ್ ಅವರ ಹೊಸ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್ ಈಗ ಘಟನೆಗೆ ಕ್ಷಮೆಯಾಚಿಸುವ ಮೂಲಕ ತೆರೆಯೆಳೆಯಲು ಮುಂದಾಗಿದ್ದಾರೆ.
‘ನಾನು ಉದ್ದೇಶಪೂರ್ವಕವಾಗಿ ಖಡ್ಗದಿಂದ ಕೇಕ್ ಕತ್ತರಿಸಲಿಲ್ಲ. ಅದು ಚಿತ್ರದ ಭಾಗವಾಗಿತ್ತು. ಮುಂದೆ ಇಂಥ ಘಟನೆಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.
ಸೇತುಪತಿ ಅವರು ಕಾನೂನು ಕ್ರಮದ ಭೀತಿಯನ್ನೂ ಎದುರಿಸುತ್ತಿದ್ದರು. ಕಾಲಿವುಡ್ನಲ್ಲಿ ಖಳಪಾತ್ರಗಳ ಮೂಲಕ ಮಿಂಚಿದವರು ಸೇತುಪತಿ. ಇತ್ತೀಚೆಗೆ ಬಿಡುಗಡೆ ಆದ ವಿಜಯ್ ಅವರ ‘ಮಾಸ್ಟರ್’ ಚಿತ್ರದಲ್ಲಿ ಕ್ರೂರಿ ಖಳನಾಯಕ ‘ಭವಾನಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.