ADVERTISEMENT

ಇಟಲಿಗೆ ಹೋಗಿಲ್ಲ, ಹನಿಮೂನ್ ಅರ್ಧಕ್ಕೆ ನಿಲ್ಲಿಸಿದ್ದೇವೆ: ಚಂದನ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:19 IST
Last Updated 14 ಮಾರ್ಚ್ 2020, 13:19 IST
ನಿವೇದಿತಾ ಗೌಡ-ಚಂದನ್ ಶೆಟ್ಟಿ
ನಿವೇದಿತಾ ಗೌಡ-ಚಂದನ್ ಶೆಟ್ಟಿ   

ಮಂಡ್ಯ: ‘ಮಧುಚಂದ್ರವನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್‌ ಬಂದಿದ್ದಕ್ಕೆ ಬೇಸರವಿದೆ. ನಾವು ನೆದರ್‌ಲೆಂಡ್‌ಗೆ ತೆರಳಿದ್ದೆವು. ಆದರೆ ಇಟಲಿಗೆ ತೆರಳಿದ್ದೆವು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ’ ಎಂದು ಬಿಗ್‌ಬಾಸ್‌ ಖ್ಯಾತಿಯ ಚಂದನ್‌ಶೆಟ್ಟಿ– ನಿವೇದಿತಾ ದಂಪತಿ ಶನಿವಾರ ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾವು ಇಟಲಿಗೆ ತೆರಳಿದ್ದೆವು ಎಂಬುದಕ್ಕೆ ಸಾಕ್ಷಿ ಇಲ್ಲ. ಆದರೂ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನೆದರ್‌ಲೆಂಡ್‌ ಹೋಗಿದ್ದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅಲ್ಲಿ ಕೊರೊನಾ ಸೋಂಕಿನ ಭೀತಿ ಇರಲಿಲ್ಲ. ಆದರೂ ಆರೋಗ್ಯ ದೃಷ್ಟಿಯಿಂದ ಮಧುಚಂದ್ರವನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್‌ ಮರಳಿದೆವು’ ಎಂದು ಹೇಳಿದರು.

‘ವಾಪಸ್‌ ಬಂದ ಕೂಡಲೇ ರಕ್ತ ಪರೀಕ್ಷೆ ಸೇರಿ ಎಲ್ಲಾ ರೀತಿಯ ಪರೀಕ್ಷೆ ಮಾಡಿಸಿಕೊಂಡಿದ್ದು ಆರೋಗ್ಯದಿಂದ ಇದ್ದೇವೆ. ಮುಂದೆಯೂ ಎಲ್ಲಾ ರೀತಿಯ ಆರೋಗ್ಯ ಪರೀಕ್ಷೆಗೆ ಸಿದ್ಧರಿದ್ದೇವೆ. ಕೋವಿಡ್‌– 19 ಭೀತಿ ಮುಗಿದ ನಂತರ ಮತ್ತೆ ಮಧುಚಂದ್ರಕ್ಕೆ ತೆರಳುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.