ADVERTISEMENT

ಮಾತು ಕೊಟ್ಟು ಕೆಟ್ಟವರು: ಬಚಾವ್ ಮಾಡಲು ಹೋಗಿ ಟಾಸ್ಕ್‌ನಿಂದ ಹೊರಬಿದ್ದ ಅಶ್ವಿನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2025, 10:29 IST
Last Updated 14 ಅಕ್ಟೋಬರ್ 2025, 10:29 IST
<div class="paragraphs"><p>ಕಾವ್ಯ ಹಾಗೂ ಅಶ್ವಿನಿ ಎಸ್.ಎನ್</p></div>

ಕಾವ್ಯ ಹಾಗೂ ಅಶ್ವಿನಿ ಎಸ್.ಎನ್

   

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್ ಸೀಸನ್ 12 ಮೂರನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಒಂದು ವಾರದಲ್ಲಿ ಮಿಡ್‌ ಸೀಸನ್ ಫಿನಾಲೆ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಸದ್ಯ ಮನೆಯಲ್ಲಿ ಉಳಿದುಕೊಳ್ಳಲು ಬಿಗ್‌ಬಾಸ್‌ ಕಾಲ ಕಾಲಕ್ಕೆ ವಿಶೇಷ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ.

ADVERTISEMENT

ಕಲರ್ಸ್‌ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮ್ರೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಗ್‌ಬಾಸ್‌ ಮನೆಮಂದಿಗೆ ಟಾಸ್ಕ್‌ ಒಂದನ್ನು ಕೊಟ್ಟಿದ್ದಾರೆ. ಆಟದಲ್ಲಿ ಉಳಿಸಲು ಇಚ್ಛಿಸುವ ಒಬ್ಬ ಸದಸ್ಯನ ಭಾವಚಿತ್ರದ ಮುಂದೆ ದೊಡ್ಡ ಚೆಂಡನ್ನು ಇಡಬೇಕು. ಚೆಂಡು ಇಲ್ಲದಿರುವ ಸದಸ್ಯ ಟಾಸ್ಕ್‌ನಿಂದ ಆಚೆ ಉಳಿಯುತ್ತಾರೆ ಎಂಬ ಟಾಸ್ಕ್‌ ಅನ್ನು ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ನೀಡಿದ್ದರು. ಸ್ಪರ್ಧಿಗಳು ಟಾಸ್ಕ್‌ನಿಂದ ಎಲ್ಲಿ ತಾನು ಹೊರ ಉಳಿದು ಬಿಡುತ್ತೇನೋ ಅಂತ ಯೋಜನೆ ಮಾಡಿಕೊಂಡು ಆಟವಾಡಿದ್ದಾರೆ. ಹೀಗೆ ರಾಶಿಕಾಳನ್ನು ಬಚಾವ್ ಮಾಡಲು ಹೋಗಿ ಅಶ್ವಿನಿ ಎಸ್‌.ಎನ್‌ ತಾನೇ ಟಾಸ್ಕ್‌ನಿಂದ ಹೊರ ಬಿದ್ದಿದ್ದಾರೆ.

ಪ್ರೊಮೋದಲ್ಲಿ ಏನಿದೆ?

ಟಾಸ್ಕ್ ಆಡುವ ಮೊದಲು ಅಶ್ವಿನಿ ಎಸ್‌.ಎನ್, ಕಾವ್ಯ, ರಾಶಿಕಾ, ಜಾಹ್ನವಿ ಮತ್ತು ಮಂಜು ಭಾಷಿಣಿ ಗುಂಪು ಗುಂಪಾಗಿ ಪೂರ್ವ ನಿರ್ಧಾರಿತವಾಗಿ ಒಬ್ಬರನ್ನು ಮತ್ತೊಬ್ಬರು ಸೇಫ್ ಮಾಡುವ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ. ಹೀಗೆ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದಂತೆ ಕೊನೆಯದಾಗಿ ಅಶ್ವಿನಿ ಎಸ್‌.ಎನ್‌ ಅವರನ್ನೇ ಟಾಸ್ಕ್‌ನಿಂದ ಹೊರ ಕಳುಹಿಸುತ್ತಾರೆ. ಟಾಸ್ಕ್‌ನಿಂದ ಔಟ್ ಆಗುತ್ತಿದ್ದಂತೆ ಅಶ್ವಿನಿ ಎಸ್‌.ಎನ್ ಬೇಸರಗೊಂಡು ‘ಬೆನ್ನಿಗೆ ಚೂರಿ ಹಾಕುತ್ತಾರೆ‘ ಎಂದು ಹೇಳಿದ್ದಾರೆ.