ADVERTISEMENT

Big Boss 8: ವಿಷವಿಕ್ಕಿದ ಅಪ್ಪ, ಮಕ್ಕಳ ಮೇಲೇ ಕಣ್ಣಾಕಿದ್ದ ತಂದೆ: ಕಹಿ ಸತ್ಯ ಬಯಲು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 8:38 IST
Last Updated 26 ಮಾರ್ಚ್ 2021, 8:38 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್  
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್     

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಗುಟ್ಟುಗಳನ್ನು ಹೊರಗಿಟ್ಟಿದ್ದಾರೆ. ಜೀವನದಲ್ಲಿ ನಡೆದ ಕಹಿ ಅನುಭವಗಳ ಬಗ್ಗೆ ಹೇಳಿಕೊಳ್ಳಬೇಕೆಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಈ ಸಂದರ್ಭ, ಚಂದ್ರಕಲಾ ಮತ್ತು ದಿವ್ಯಾ ಸುರೇಶ್ ಅವರು,ಅವರಿಗೆ ತಂದೆಯಿಂದ ಆಗಿದ್ದ ಅತೀವವಾದ ನೋವನ್ನು ತೆರೆದಿಟ್ಟರು.

ಅನ್ನಕ್ಕೆ ವಿಷ ಬೆರೆಸಿದ್ದ ಅಪ್ಪ: ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಲವಲವಿಕೆಯಿಂದಓಡಾಡಿಕೊಂಡಿರುವ ದಿವ್ಯಾ ಸುರೇಶ್, ಬಾಲ್ಯದಲ್ಲಿನಡೆದ ಆಘಾತಕಾರಿ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ನಾನು ಆಗ 2 ನೇ ತರಗತಿ ಓದುತ್ತಿದ್ದೆ, ಅಂದು ದೀಪಾವಳಿ ಹಬ್ಬ, ಅಮ್ಮ ಮನೆಯಲ್ಲಿರಲಿಲ್ಲ. ಕಂಠಪೂರ್ತಿ ಕುಡಿದಿದ್ದ ಅಪ್ಪ, ಅನ್ನಕ್ಕೆ ವಿಷ ಹಾಕಿ ನನಗೆ ಮತ್ತು ಸಹೋದರನಿಗೆ ತಿನಿಸಿದರು. ಅವರೂ ಸಹ ಅದೇ ಅನ್ನ ತಿಂದಿದ್ದರು. ಯಾವುದೋ ವಿಷಯಕ್ಕೆ ನಾವು ಮೂವರೂ ಸಾಯಬೇಕೆಂದು ಅಪ್ಪ ನಿರ್ಧರಿಸಿದ್ದರು. ನೆರವಿಗೆ ಬಂದ ಊರಿನ ಜನನಮಗೆ ಉಪ್ಪು ನೀರು ಕುಡಿಸಿ ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್, ನಾವು ಬದುಕಿದೆವು. ಈಗಲೂ ಆ ಘಟನೆ ಕಣ್ಣೆದುರಿಗೆ ಬರುತ್ತದೆ ಎಂದು ಕಣ್ಣೀರು ಹಾಕಿದರು.

ADVERTISEMENT

ಅಪ್ಪನ ಅಸಹ್ಯ ವರ್ತನೆ ಬಗ್ಗೆ ಚಂದ್ರಕಲಾ ಮಾತು: ಆಗ ನಾನು 10 ವರ್ಷದ ಬಾಲಕಿ.ನನ್ನಪ್ಪ ತುಂಬಾ ಕುಡಿಯುತ್ತಿದ್ದರು. ರಾತ್ರಿ ಹೊತ್ತು ನಾನು ಮತ್ತುತಂಗಿ ಸ್ಕರ್ಟ್ ಹಾಕಿ ಮಲಗುತ್ತಿದ್ದೆವು. ಆಗ ನಮ್ಮ ಮೇಲೆಯೇ ನನ್ನಪ್ಪನ ಕೆಟ್ಟ ದೃಷ್ಟಿ ಬಿದ್ದಿತ್ತು. ಇದು ನಮ್ಮ ಅಮ್ಮನ ಗಮನಕ್ಕೆ ಬಂದು ಅದನ್ನೆಲ್ಲ ತಡೆದರು. ನಿತ್ಯ ನನ್ನಪ್ಪ ಕುಡಿದು ಅಮ್ಮನಿಗೆ ಕಾಟ ಕೊಡುತ್ತಿದ್ದರು. ಬಳಿಕ, ನಾವೇ ಅಪ್ಪನಿಂದ ಅಮ್ಮನನ್ನು ಬೇರ್ಪಡಿಸಿದೆವುಎಂದು ಚಂದ್ರಕಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.