
ಕಿಚ್ಚ ಸುದೀಪ್, ಗಿಲ್ಲಿ ನಟ
ಚಿತ್ರ: ಇನ್ಸ್ಟಾಗ್ರಾಂ
ಬಿಗ್ಬಾಸ್ 12ನೇ ಸೀಸನ್ನ ವಾರದ ಪಂಚಾಯಿತಿ ನಡೆಸಲು ಕಿಚ್ಚ ಸುದೀಪ್ ಅವರು ವೇದಿಕೆಗೆ ಆಗಮಿಸಿದ್ದಾರೆ. ಇದೇ ವೇಳೆ ಕಿಚ್ಚ ಸುದೀಪ್ ಮುಂದೆಯೇ ಗಿಲ್ಲಿ ನಟನ ವಿರುದ್ಧ ಸಹ ಸ್ಪರ್ಧಿಗಳು ಸಾಲು ಸಾಲು ಆರೋಪ ಮಾಡಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೊ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ವೇದಿಕೆಗೆ ಬಂದ ಕಿಚ್ಚ ಸುದೀಪ್ ಅವರು ‘ಗಿಲ್ಲಿ ಕ್ಯಾಪ್ಟನ್ಸಿ ಹೇಗಿತ್ತು’ ಎಂದು ಕೇಳಿದ್ದಾರೆ. ಆ ಕೂಡಲೇ ಅಶ್ವಿನಿ ಗೌಡ, ಸ್ಪಂದನಾ, ರಕ್ಷಿತಾ ಹಾಗೂ ರಘು ಗಿಲ್ಲಿ ಬಗ್ಗೆ ದೂರಿದ್ದಾರೆ.
ಗಿಲ್ಲಿ ನಟ ಈ ವಾರ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು. ಆ ಸಂದರ್ಭದಲ್ಲಿ ಗಿಲ್ಲಿ ನಾಮಿನೇಷನ್ ವಿಚಾರದಲ್ಲಿ ಕ್ಯಾವಾಳನ್ನು ಸೇಪ್ ಮಾಡಿದ್ದಾರೆ ಎಂದು ಅಶ್ವಿನಿ ಗೌಡ ನೇರವಾಗಿ ಆರೋಪಿಸಿದ್ದಾರೆ. ಆಗ ಮಾತಾಡಿದ ಸ್ಪಂದನಾ ಕ್ಯಾಪ್ಟನ್ ಆಗಿ, ಗಿಲ್ಲಿಯಾಗಿ, ಸ್ಪರ್ಧಿಯಾಗಿ ಒಂಥರಾ ವಿಷಕಾರಿ ರೀತಿ ಅನಿಸಿತು. ಯಾರನ್ನೇ ನಿಲ್ಲಿಸಿದ್ದರು ಕಾವ್ಯ ಅವರನ್ನು ನಾಮಿನೇಟ್ ಮಾಡುತ್ತಿರಲಿಲ್ಲ ಎಂದರು. ಕಿಚ್ಚ ಸುದೀಪ್ ‘ನಾಮಿನೇಷನ್ ಪ್ರಕ್ರಿಯೆ ಸರಿ ಹೋಗಲಿಲ್ಲ. ಕಾವ್ಯ ಅವರನ್ನು ಉಳಿಸಲು ಇಡೀ ಪ್ರಕ್ರಿಯೆ ನಡೀತು’ ಎಂದು ಕೋಪಗೊಂಡರು. ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಗಲಿದೆ ಎಂದು ತಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.