ಮುಂಬೈ (ಪಿಟಿಐ): ‘ರಾಮಾಯಣ’, ‘ಮಹಾಭಾರತ’ದ ನಂತರ ‘ಶ್ರೀಕೃಷ್ಣ’ ಪೌರಾಣಿಕ ಧಾರಾವಾಹಿಯನ್ನು ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರಕಿದೆ.
ಶೀಘ್ರದಲ್ಲೇ 'ಶ್ರೀಕೃಷ್ಣ' ಬರಲಿದೆ ಎಂದು ಡಿಡಿ ವಾಹಿನಿ ತನ್ನ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದೆ.ರಮಾನಂದ್ ಸಾಗರ್ ನಿರ್ದೇಶನದ ಈ ಧಾರಾವಾಹಿ 20 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು.1993 ರಲ್ಲಿ ಈ ಧಾರಾವಾಹಿ ಮೊದಲ ಬಾರಿಗೆ ದೂದರ್ಶನ ಮೆಟ್ರೊ ವಾಹಿನಿಯಲ್ಲಿ (ಡಿಡಿ 2) ಪ್ರಸಾರವಾಗಿತ್ತು. ನಂತರ, 1996ರಲ್ಲಿ ಡಿಡಿ ರಾಷ್ಟ್ರೀಯ ವಾಹಿನಿಯಲ್ಲೂ ಪ್ರಸಾರವಾಯಿತು.
ಸರ್ವದಾಮನ್ ಡಿ ಬ್ಯಾನರ್ಜಿ ಮತ್ತುಸ್ವಪ್ನಿಲ್ ಜೋಷಿ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.