ADVERTISEMENT

ದಿನ ಭವಿಷ್ಯ: ಗುಂಪು ಚಟುವಟಿಕೆಯಲ್ಲಿ ಮುಂದಾಳತ್ವವು ನಿಮ್ಮದಾಗಲಿದೆ

ಶುಕ್ರವಾರ, 14 ನವೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ನವೆಂಬರ್ 2025, 19:04 IST
Last Updated 13 ನವೆಂಬರ್ 2025, 19:04 IST
   
ಮೇಷ
  • ಹಲವು ವಾದ ವಿವಾದಗಳಿಂದ ಸಂಬಂಧದಲ್ಲಿ ಉಂಟಾದ ಒಡಕು ಗಳು ಸಮಾಧಾನದ ಮಾತುಗಳಿಂದಾಗಿ ಪರಿಹಾರವಾಗುತ್ತವೆ. ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಜನರು ಬರಲಿದ್ದಾರೆ.
  • ವೃಷಭ
  • ದೇಶಭಕ್ತಿಯ ಹೆಸರಿನಲ್ಲಿ ನಡೆಸಿರುವ ಹಾಗೂ ನಡೆಸುವ ಕಾರ್ಯಗಳು ಜನಮಾನ್ಯವಾಗುತ್ತವೆ. ಗುಂಪು ಚಟುವಟಿಕೆಯಲ್ಲಿ ಮುಂದಾಳತ್ವವು ನಿಮ್ಮದಾಗಲಿದೆ. ಸಾಂಸಾರಿಕ ಜವಾಬ್ದಾರಿಗಳು ಹೆಚ್ಚಲಿವೆ.
  • ಮಿಥುನ
  • ಸೂರ್ಯೋದಯದೊಳಗೆ ಮನಸಂಕಲ್ಪ ನೆರವೇರಿಸಿಕೊಳ್ಳಲು ಸರ್ವಪ್ರಯತ್ನ ನಡೆಸುವಿರಿ. ಧನ ಆದಾಯಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಇರುವುದಿಲ್ಲ. ಮಾರ್ಗದರ್ಶಕರ ಸಲಹೆ ಪಡೆದು ಪಾಲಿಸಿರಿ.
  • ಕರ್ಕಾಟಕ
  • ದಾನ-ಧರ್ಮ ಸ್ವಭಾವ ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಿ. ಗೃಹ ಉತ್ಪಾದಕ ವಸ್ತುಗಳ ಮಾರಾಟದಲ್ಲಿ ಲಾಭವಾಗುವ ಸಾಧ್ಯತೆಗಳಿವೆ. ತಂಗಿಯರ ವಿದ್ಯಾಭ್ಯಾಸದಲ್ಲಿ ಮೇಲ್ವಿಚಾರಣೆ ನಡೆಸಿ.
  • ಸಿಂಹ
  • ಸ್ಥಿರ ಆಸ್ತಿಯನ್ನು ಸಂಪಾದಿಸುವಲ್ಲಿ ನಿರ್ಣಯದಲ್ಲಿ ದೃಢವಾಗಿ ನಿಲ್ಲುವಂತಹ ತೀರ್ಮಾನವನ್ನು ಮಾಡಿಕೊಳ್ಳಿರಿ. ಸಂಬಂಧಿಗಳಲ್ಲಿ ಆದರ ಭಾವದಿಂದ ನಡೆದುಕೊಳ್ಳುವಿರಿ. ಪ್ರಯಾಣಕ್ಕೆ ಹೆಚ್ಚು ಧನ ವ್ಯಯ ಆಗುವುದು.
  • ಕನ್ಯಾ
  • ಮನೆಯಲ್ಲಿ ಸುಖ-ಶಾಂತಿ ಸಮೃದ್ಧಿಯಾಗಿದ್ದರೂ ಮನದಲ್ಲಿ ಮಕ್ಕಳ ವಿಚಾರವಾಗಿ ಭಯದ ಭೀತಿ ತೋರಿಬಂದೀತು. ನೆರೆ ಮನೆಯವರ ಶುಭ ಸಮಾರಂಭಕ್ಕೆ ಹೋಗುವ ಸಲುವಾಗಿ ಕಿರು ಪ್ರಯಾಣ ಇರುವುದು.
  • ತುಲಾ
  • ವ್ಯವಹಾರದಲ್ಲಿನ ಹಿಂದಿನ ನಿರ್ಧಾರಗಳು ಒಳಿತಿಗಾಗಿ ಬದಲಾಗುವ ಸಂಭವವಿದೆ. ಕಳೆದು ಹೋದ ವಸ್ತುವನ್ನು ಸಮಾಧಾನದ ಶೋಧನದಿಂದಾಗಿ ಪಡೆದುಕೊಳ್ಳುವಿರಿ. ಪ್ರವಾಸ ಯೋಜನೆಗಳು ಕಾರ್ಯ ರೂಪಕ್ಕೆ ಬರಲಿವೆ.
  • ವೃಶ್ಚಿಕ
  • ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಂಪಾದನೆಯ ಜತೆಯಲ್ಲಿ ಉಡುಗೊರೆ ಸಿಗುವ ಯೋಗ. ಮುಗ್ಧವಾದ ಮಕ್ಕಳ ಆಟೋಪಚಾರವನ್ನು ಕಂಡು ಹರ್ಷಗೊಳ್ಳುವಿರಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
  • ಧನು
  • ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವ ಆಹಾರವನ್ನು ಸೇವಿಸದಿರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು.
  • ಮಕರ
  • ಉದ್ಯೋಗದ ಬದುಕಿನಲ್ಲಿ ತಪ್ಪಿ ಹೋಗಿದ್ದ ಅವಕಾಶಗಳು ದೊರೆಯಲಿವೆ. ಬಹುಜನರ ಒಡನಾಟದಿಂದ ವಿಶ್ವಾಸ, ಪ್ರೀತಿ ಪಡೆಯುವಂತಾಗುವುದು. ಸಹಿಯನ್ನು ನಕಲು ಪಡಿಸುವವರಿದ್ದಾರೆ. ಎಚ್ಚರವಾಗಿರಿ.
  • ಕುಂಭ
  • ಮನೆಯಲ್ಲಿನ ಮಂಗಳ ಕಾರ್ಯಕ್ರಮಕ್ಕೆ ಆಪ್ತರ ನೆರವು ದೊರೆಯದೆ ಖೇದ ಉಂಟಾದರೂ ಹಠದಿಂದ ಉತ್ತಮವಾಗಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಸ್ವಪ್ರಯತ್ನದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
  • ಮೀನ
  • ಗ್ರಾಮ ಪಂಚಾಯ್ತಿಯಂಥ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಭಾರ ಹೊರಬೇಕಾಗುವುದು. ಸ್ವಪ್ನಸದೃಶ್ಯವಾದ ಘಟನೆಗಳನ್ನು ನೋಡುವ ಸಾಧ್ಯತೆ ಇದೆ. ಕೃಷಿಕರಿಗೆ ಕೃಷಿಯಲ್ಲಿ ಉತ್ಸಾಹ ಹೆಚ್ಚುವಂತಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.