ADVERTISEMENT

ದಿನ ಭವಿಷ್ಯ: ಸೋಮವಾರ, 25 ಆಗಸ್ಟ್ 2025: ಕಾರ್ಮಿಕರಿಗೆ ಆಡಳಿತ ವರ್ಗದಿಂದ ಅನುಕೂಲ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಆಗಸ್ಟ್ 2025, 22:17 IST
Last Updated 24 ಆಗಸ್ಟ್ 2025, 22:17 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವೆ ಇದ್ದ ಮನಸ್ತಾಪವನ್ನು ಮುಕ್ತ ಹಾಗೂ ಸ್ಪಷ್ಟ ಮಾತುಕತೆಗಳಿಂದ ಬಗೆಹರಿಸಿಕೊಳ್ಳಬಹುದು. ಕಾರ್ಮಿಕರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ.
  • ವೃಷಭ
  • ಪಶುಸಂಗೋಪನೆಯಲ್ಲಿ ಮತ್ತು ಪಶು ಆಹಾರ ಮಾರಾಟಗಾರರಿಗೆ ಅಧಿಕ ಲಾಭ ಕಂಡುಬರಲಿದೆ. ಉದ್ಯೋಗರಂಗದಲ್ಲಿ ಅನಿರೀಕ್ಷಿತ ಘಟನೆಗಳು ವಿಶೇಷ ವ್ಯಕ್ತಿಯಾಗಿ ಗುರುತಿಸುವಂತಾಗಲಿದೆ.
  • ಮಿಥುನ
  • ಕೆಲ ನಿರ್ಧಾರಗಳನ್ನು ಬದಲಾಯಿಸಿಕೊಳ್ಳುವುದರಿಂದ ಕಾರ್ಯಗಳು ಸುಲಲಿತವಾಗಿ ನೆರವೇರಲಿವೆ. ಒತ್ತಡವನ್ನು ನಿವಾರಿಸಿಕೊಳ್ಳಲು ವಿಶ್ರಾಂತಿ ಪಡೆಯಿರಿ. ಕುಟುಂಬ ಸಂಬಂಧಗಳು ಗಟ್ಟಿಯಾಗಲಿವೆ.
  • ಕರ್ಕಾಟಕ
  • ರಫ್ತು ಉದ್ಯಮದವರಿಗೆ ಅಡೆತಡೆಗಳು ಉಂಟಾಗಬಹುದು. ಗೊಂದಲದ ಪರಿಸ್ಥಿತಿಯಿಂದ ಹೊರಬರಲು ಮಾರ್ಗದರ್ಶಕರ ಸಲಹೆ ತೆಗೆದುಕೊಳ್ಳಿ. ಮಹಾಗಣಪತಿಯನ್ನು ಆರಾಧಿಸಿ.
  • ಸಿಂಹ
  • ಹಣಕಾಸು ಪರಿಸ್ಥಿತಿ ದುರ್ಬಲವಾಗುವುದರಿಂದ ಒತ್ತಡ ತರುವಂಥ ಕೆಲಸಗಳಿಂದ ದೂರವಿರಿ. ನೂತನ ಕಟ್ಟಡಗಳ ನಿರ್ಮಾಣದ ಗುತ್ತಿಗೆ ಕೆಲಸವು ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಶ್ರೇಯಸ್ಸು, ಮೇಧಾಶಕ್ತಿ ಹೆಚ್ಚಲಿದೆ.
  • ಕನ್ಯಾ
  • ಅಧಿಕ ರಕ್ತದೊತ್ತಡದಿಂದ ಬಳಲುವಂತಾಗಬಹುದು. ಸೇವಿಸುವ ಆಹಾರದಲ್ಲಿ ನಿಯಮವಿರಲಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯ ದಿನ. ಸಾಹಿತ್ಯ, ಕಾದಂಬರಿ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುವುದು.
  • ತುಲಾ
  • ಸಿಹಿತಿಂಡಿ ತಯಾರು ಮಾಡಿ ಮಾರಾಟ ಮಾಡುವವರಿಗೆ ಬೇಡಿಕೆ ಹೆಚ್ಚಲಿದೆ. ರಾಜಕೀಯವಾಗಿ ಒದಗಿ ಬರಲಿರುವ ಅಧಿಕಾರದ ಅವಕಾಶಗಳನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ.
  • ವೃಶ್ಚಿಕ
  • ಬಹುದಿನಗಳ ನಿರಂತರ ಔಷಧಿ ಸೇವನೆಯಿಂದ ಕಾಯಿಲೆ ನಿವಾರಣೆಯಾಗಿ ಆರೋಗ್ಯ ಉತ್ತಮ ಸ್ಥಿತಿಗೆ ಬರುವುದು. ನೂತನ ಯೋಜನೆಗೆ ತಂದೆ-ತಾಯಿಯ ಮೂಲಕ ಆರ್ಥಿಕ ಸಹಾಯ ಸಿಗುವುದು.
  • ಧನು
  • ಮಕ್ಕಳ ವಿದ್ಯಾಭ್ಯಾಸ ಹಾಗೂ ದಿನಚರಿಯ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುವುದು. ಕೆಟ್ಟ ಸಹವಾಸ ಮಾಡಿ ದಾರಿ ತಪ್ಪದಂತೆ ನೋಡಿಕೊಳ್ಳಿ. ನವಗ್ರಹಗಳ ಆರಾಧನೆ ಶುಭ ತರಲಿದೆ.
  • ಮಕರ
  • ಸರ್ಕಾರಿ ನೌಕರರಿಗೆ ಸುಯೋಗವೆಂದು ಹೇಳಬಹುದು. ಸಹೋದ್ಯೋಗಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳಲಿದೆ. ಅವಶ್ಯಕವಾಗಿರುವ ವಸ್ತುಗಳ ಖರೀದಿಯಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಸಿಗುವುದು.
  • ಕುಂಭ
  • ವಿದೇಶಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಲಭಿಸುವುದು. ಆಸ್ಪತ್ರೆ ಸಿಬ್ಬಂದಿಗೆ ಸರ್ಕಾರದಿಂದ ಅನುಕೂಲ ಲಭಿಸುವ ಲಕ್ಷಣವಿದೆ. ಕಫ ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು.
  • ಮೀನ
  • ವ್ಯಾಪಾರ ವ್ಯವಹಾರಗಳಿಗೆ ಹೊಸ ತಿರುವು ಮೂಡಲಿದೆ. ಸಮಯ ಪರಿಪಾಲನೆಯ ಬಗ್ಗೆ ಗಮನವಿರಲಿ. ಸಮಯವನ್ನು ವ್ಯವಸ್ಥಿತ ರೀತಿಯಲ್ಲಿ ವಿಭಾಗಿಸಿ, ಸಮಯೋಚಿತವಾಗಿ ಕೆಲಸ ನಿರ್ವಹಿಸಿದರೆ ಬುದ್ಧಿವಂತರಾಗುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.