ಕೊಚ್ಚಿ (ಪಿಟಿಐ): ರಾಷ್ಟ್ರೀಯ ಚಾರಣ ಶಿಬಿರದಲ್ಲಿ ಭಾಗವಹಿಸಿದ್ದ ದೆಹಲಿ ಮೂಲದ ಐವರು ಎನ್ಸಿಸಿ ವಿದ್ಯಾರ್ಥಿಗಳು ಪೆರಿಯಾರ್ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ಇಲ್ಲಿ ನಡೆದಿದೆ.
ಎನ್ಸಿಸಿ ಶಿಬಿರಾರ್ಥಿಗಳು ಬುಧವಾರ ಸ್ನಾನಕ್ಕೆಂದು ಪೆರಿಯಾರ್ ನದಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ಎನ್ಸಿಸಿ ನಿರ್ದೇಶನಾಲಯದ ಎರ್ನಾಕುಲಂ ಘಟಕವು ಮಲಯತ್ತೂರು ಬೆಟ್ಟದಲ್ಲಿ ಇದೇ ತಿಂಗಳ 23ರಿಂದ ಏರ್ಪಡಿಸಿರುವ ಚಾರಣ ಶಿಬಿರದಲ್ಲಿ ದೇಶದ ವಿವಿಧೆಡೆಯಿಂದ ಒಂದು ಸಾವಿರ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.