ADVERTISEMENT

‘ಒಖಿ’ ಚಂಡಮಾರುತ: ನೌಕಾಪಡೆಯಿಂದ ಕೇರಳದ ಕರಾವಳಿ ಸಮುದ್ರದಲ್ಲಿದ್ದ ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 6:09 IST
Last Updated 3 ಡಿಸೆಂಬರ್ 2017, 6:09 IST
ನೌಕಾಪಡೆಯಿಂದ ಹಡಗಿನಿಂದ ಮೀನುಗಾರರಿರುವ ದೋಣಿಯ ರಕ್ಷಣಾ ಕಾರ್ಯಾಚರಣೆ ದೃಶ್ಯ.
ನೌಕಾಪಡೆಯಿಂದ ಹಡಗಿನಿಂದ ಮೀನುಗಾರರಿರುವ ದೋಣಿಯ ರಕ್ಷಣಾ ಕಾರ್ಯಾಚರಣೆ ದೃಶ್ಯ.   

ಬೆಂಗಳೂರು: ‘ಒಖಿ’ ಚಂಡಮಾರುತ ಅಬ್ಬರಕ್ಕೆ ಸಿಲುಕಿರುವ ಮೀನುಗಾರರ ರಕ್ಷಣಾ ಕಾರ್ಯಾಚರಣೆಯನ್ನು ಭಾರತೀಯ ನೌಕಾಪಡೆ ಭಾನುವಾರವೂ ಮುಂದುವರೆಸಿದೆ.

ಕೇರಳದ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ್ದ ಮೀನುಗಾರರ ದೋಣಿಗಳನ್ನು ಪತ್ತೆ ಮಾಡಿ, ಅವುಗಳನ್ನು ರಕ್ಷಿಸುವ ಕಾರ್ಯವನ್ನು ನೌಕಾಪಡೆಯ ಐಎನ್‌ಎಸ್‌ ಶಾರ್ದಾ ನೌಕೆ ಮಾಡಿದೆ.

ರಕ್ಷಣಾ ಕಾರ್ಯಕ್ಕೆ 10 ನೌಕೆಗಳು ಹಾಗೂ 8 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.