ಮುಂಬೈ (ಪಿಟಿಐ): ನೆಲದಡಿ ಅಳವಡಿಸಿದ್ದ ನೀರಿನ ಪೈಪ್ಲೈನ್ ಸಿಡಿದ ಪರಿಣಾಮ ಒಬ್ಬ ಮೃತಪಟ್ಟು, ಎಂಟು ಜನರು ಗಾಯಗೊಂಡಿರುವ ಘಟನೆ ಮುಂಬೈನ ಗೋವಿಂದ ಉಪನಗರದ ಸಂಜೀವಿನ ಸೊಸೈಟಿಯ ಬಳಿ ಸೋಮವಾರ ಬೆಳಗಿನ ಜಾವ 3.30ರ ವೇಳೆಯಲ್ಲಿ ನಡೆದಿದೆ.
ಮೃತನನ್ನು ಡಿ.ಹಜಾರಿ (60) ಎಂದು ಗುರುತಿಸಲಾಗಿದ್ದು, ಈತ ಸಂಜೀವಿನ ಹೌಸಿಂಗ್ ಸೊಸೈಟಿಯ ನೆಲಮಹಡಿಯಲ್ಲಿ ವಾಸವಾಗಿದ್ದ. ಈ ಅವಘಡ ನಡೆದ ವೇಳೆ ನೆಲಮಹಡಿಯ ಜನರು ನಿದ್ರಾವಸ್ಥೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.