ಗುವಾಹಟಿ (ಅಸ್ಸಾಂ): ಹೆಸರಿನ ಗೊಂದಲದಿಂದಾಗಿ ಚೇತರಿಸಿಕೊಂಡ ರೋಗಿಯನ್ನು ಬಿಡುಗಡೆ ಮಾಡುವ ಬದಲು ಕೋವಿಡ್ ರೋಗಿಯೊಬ್ಬರನ್ನು ಮನೆಗೆ ವಾಪಸ್ ಕಳುಹಿಸಿದ ಘಟನೆ ದರಂಗ್ ಜಿಲ್ಲೆಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಮಂಗಲದಾಯ್ ಸಿವಿಲ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ 14 ಮಂದಿ ರೋಗಿಗಳ ಹೆಸರನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದ್ದ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದರಿಂದ ಅವರನ್ನೇ ಬಿಡುಗಡೆ ಮಾಡಲಾಯಿತು. ಇಬ್ಬರ ಹೆಸರು ಒಂದೇ ರೀತಿ ಇದ್ದುದ್ದರಿಂದ ಮತ್ತು ಮುಖಗವುಸು ಹಾಕಿದ್ದ ಕಾರಣ ಈ ಆಚಾತುರ್ಯ ಘಟನೆ ನಡೆಯಿತು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.
ಕೂಡಲೇ ತಪ್ಪಿನ ಅರಿವಾಗಿ ಆಸ್ಪತ್ರೆಯವರು ಆಂಬ್ಯುಲೆನ್ಸ್ ಕಳುಹಿಸಿ ರೋಗಿಯನ್ನು ವಾಪಸ್ ಕರೆ ತಂದರು.ಈ ವ್ಯಕ್ತಿಯನ್ನು ಮರುದಿನ ಪರೀಕ್ಷಿಸಿದಾಗ ನೆಗೆಟಿವ್ ಬಂದಿದ್ದು ಮನೆಗೆ ಕಳುಹಿಸಲಾಯಿತುಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.