ADVERTISEMENT

1984ರ ಸಿಖ್ ವಿರೋಧಿ ಹಿಂಸಾಚಾರ: ಕಾಂಗ್ರೆಸ್ ನಾಯಕ ಜಗದೀಶ್‌ಗೆ ನಿರೀಕ್ಷಣಾ ಜಾಮೀನು

ಪಿಟಿಐ
Published 4 ಆಗಸ್ಟ್ 2023, 10:18 IST
Last Updated 4 ಆಗಸ್ಟ್ 2023, 10:18 IST
ಕಾಂಗ್ರೆಸ್ ನಾಯಕ ಜಗದೀಶ್‌ ಟೈಟ್ಲರ್‌
ಕಾಂಗ್ರೆಸ್ ನಾಯಕ ಜಗದೀಶ್‌ ಟೈಟ್ಲರ್‌   ಚಿತ್ರಕೃಪೆ: ಪಿಟಿಐ

ನವದೆಹಲಿ: 1984ರ ಸಿಖ್‌ ವಿರೋಧಿ ಹಿಂಸಾಚಾರದ ವೇಳೆ ಪುಲ್‌ ಬಂಗಷ್‌ನಲ್ಲಿ ನಡೆದ ಕೊಲೆ ಪ್ರಕರಣಗಳ ಸಂಬಂಧ ಕಾಂಗ್ರೆಸ್ ನಾಯಕ ಜಗದೀಶ್‌ ಟೈಟ್ಲರ್‌ ಅವರಿಗೆ ದೆಹಲಿ ನ್ಯಾಯಾಲಯ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವಿಶೇಷ ನ್ಯಾಯಾದೀಶ ವಿಕಾಸ್‌ ಧುಳ್‌ ಅವರು ಟೈಟ್ಲರ್‌ಗೆ ಜಾಮೀನು ನೀಡುವ ಮುನ್ನ, ಸಾಕ್ಷ್ಯ ನಾಶದ ಪ್ರಯತ್ನ ನಡೆಸುವಂತಿಲ್ಲ ಹಾಗೂ ಅನುಮತಿ ಇಲ್ಲದೆ ದೇಶ ತೊರೆಯಬಾರದು ಎಂಬ ಷರತ್ತುಗಳನ್ನು ವಿಧಿಸಿದ್ದಾರೆ.

ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್‌ ಸಮುದಾಯದವರಾದ ಅವರ ಅಂಗರಕ್ಷಕರೇ 1984ರ ಅಕ್ಟೋಬರ್‌ 31ರಂದು ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಸಿಖ್‌ ವಿರೋಧಿ ಹಿಂಸಾಚಾರ ಭುಗಿಲೆದ್ದಿತ್ತು. ಮರುದಿನ (ನ. 1) ಪುಲ್‌ ಬಂಗಷ್‌ನಲ್ಲಿ ಗುರುದ್ವಾರವನ್ನು ದ್ವಂಸಗೊಳಿಸಿ ಮೂವರನ್ನು ಹತ್ಯೆ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.