ADVERTISEMENT

ಪಂಚರಾಜ್ಯ ಚುನಾವಣೆ; ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 10:22 IST
Last Updated 20 ಜನವರಿ 2022, 10:22 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ದೇಶದಲ್ಲಿ ನಿರುದ್ಯೋಗ ಪ್ರಮಾಣ ವ್ಯಾಪಕವಾಗಿದೆ. ಆದರೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದ ಮೋದಿ ಅವರದು ಕೇವಲ ಹುಸಿ (ಜುಮ್ಲಾ) ಭರವಸೆಯಾಗಿಯೇ ಉಳಿದಿದೆ ಎಂದಿದ್ದಾರೆ.

ವರ್ಷಕ್ಕೆ ಎರಡು ಕೋಟಿ ಕೆಲಸ, 2022 ಕ್ಕೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ, ರೈತರ ಆದಾಯ ದ್ವಿಗುಣ ಎಂಬ ಭರವಸೆಯನ್ನು ಮೋದಿ ನೀಡಿದ್ದರು. ಇದರಲ್ಲಿ ಒಂದನ್ನಾದರೂ ಮೋದಿ ಮಾಡಿದ್ದಾರೆಯೇ? ಎಂದು ಸಿಬಲ್ ಪ್ರಶ್ನಿಸಿದ್ದಾರೆ.

ADVERTISEMENT

ಇನ್ನು ಇದೇ ವಿಚಾರವಾಗಿ ವರ್ಚುವಲ್ ಸುದ್ದಿಗೋಷ್ಟಿ ನಡೆಸಿರುವ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಅವರು, ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಶೇ 84 ಕುಟುಂಬಗಳ ಆದಾಯ ಕುಸಿತವಾಗಿದೆ. ಆದರೇ ಇದೇ ಅವದಿಯಲ್ಲಿ ಭಾರತದ ಕೋಟ್ಯಧಿಪತಿಗಳ ಸಂಖ್ಯೆ 102 ರಿಂದ 104 ಕ್ಕೆ ಏರಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

55.2 ಕೋಟಿ ಭಾರತೀಯರಿಗೆ ಸಮಾನವಾಗಿ ಹಂಚಬಹುದಾದ ಆಸ್ತಿ ಭಾರತದಲ್ಲಿ ಕೇವಲ 98 ಉದ್ಯಮಿಗಳ ಬಳಿ ಇದೆ. ಕೋಟ್ಯಧಿಪತಿಗಳ ಸಂಪತ್ತು ಒಂದೇ ವರ್ಷದಲ್ಲಿ 23.14 ಲಕ್ಷ ಕೋಟಿಯಿಂದ 53.16 ಲಕ್ಷ ಕೋಟಿಗೆ ಏರಿಕೆಯಾಗಿದೆ. ಮೋದಿ ಅವರ ಅಭಿವೃದ್ಧಿ ಇದೇನಾ? ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.