ADVERTISEMENT

BJP, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ದಾಳಿ:200 ವರ್ಷದ ಹಳೆಯ ಸಮಾಧಿಗೆ ಹಾನಿ

ಸಂಜಯ್ ಪಾಂಡೆ, ಲಖನೌ
Published 12 ಆಗಸ್ಟ್ 2025, 5:06 IST
Last Updated 12 ಆಗಸ್ಟ್ 2025, 5:06 IST
ಸಮಾಧಿ– ಸಾಂದರ್ಭಿಕ ಚಿತ್ರ
ಸಮಾಧಿ– ಸಾಂದರ್ಭಿಕ ಚಿತ್ರ   

ಲಖನೌ: ಇಲ್ಲಿನ ಫತೇಹ್‌ಪುರ ಜಿಲ್ಲೆಯಲ್ಲಿರುವ 200 ವರ್ಷದ ಹಳೆಯ ‘ಮಕ್‌ಬಾರ’ (ಸಮಾಧಿ) ಹಾಗೂ ಎರಡು ‘ಮಜಾರ್‌’ (ದೇಗುಲ)ಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸೋಮವಾರ ಹಾನಿಗೊಳಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

‘ಸಮಾಧಿಯು ಈ ಹಿಂದೆ ದೇವಾಲಯವಾಗಿತ್ತು. ಮುಸಲ್ಮಾನರ ಆಡಳಿತದಲ್ಲಿ ಅದನ್ನು ಸಮಾಧಿಯನ್ನಾಗಿ ಪರಿವರ್ತಿಸಲಾಗಿತ್ತು’ ಎಂದು ಹಿಂದೂ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಪೊಲೀಸ್‌ ಮೂಲಗಳ ಪ್ರಕಾರ, ‘ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್‌ ಸಂಘಟನೆಯ ಕಾರ್ಯಕರ್ತರು ಸಮಾಧಿ ಮುಂದೆ ಸೇರಿದ್ದರು. ಈ ವೇಳೆ ಅಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು, ‘ನವಾಬ್‌ ಅಬ್ದೂಸ್‌ ಸಮಾಧಿ’ಗೆ ತೆರಳಿ ಆರತಿ ಹಾಗೂ ಪೂಜೆ ಸಲ್ಲಿಸಿದರು.

ADVERTISEMENT

ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಮಕ್‌ಲಾಲ್‌ ಪಾಲ್‌, ಮಾಜಿ ಶಾಸಕ ವಿಕ್ರಮ್‌ ಸಿಂಗ್‌ ನೇತೃತ್ವದಲ್ಲಿ ಒಳಗೆ ನುಗ್ಗಿದ ಕಾರ್ಯಕರ್ತರು ಹನುಮಾನ್‌ ಚಾಲೀಸಾವನ್ನು ಪಠಿಸಿದ್ದಾರೆ.

ಈ ವೇಳೆ ಕೆಲವರು ಆವರಣದಲ್ಲಿದ್ದ ಎರಡು ಒಳಗಿದ್ದ ಎರಡು ದೇಗುಲಗಳನ್ನು ಕಲ್ಲು ಹಾಗೂ ಬಡಿಗೆಗಳಿಂದ ಹಾನಿಗೊಳಿಸಿದ್ದಾರೆ. ಕೆಲವರು ಸಮಾಧಿ ಮೇಲೆ ದೊಡ್ದದಾದ ಕಲ್ಲು, ಲಾಠಿ ಬಳಸಿ ಹಾನಿಗೊಳಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ದಾಖಲಾಗಿದೆ.

ಈ ವೇಳೆ ಮತ್ತೊಂದು ಸಮುದಾಯದವರು ಸ್ಥಳಕ್ಕೆ ಭೇಟಿ ನೀಡಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರ ಜೊತೆಗೆ ವಾಗ್ವಾದ ನಡೆಸಿದ್ದಾರೆ.

‘ತಕ್ಷಣವೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಜನರು ಒಳಪ್ರವೇಶಿದಂತೆ ತಡೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.