ADVERTISEMENT

ವಿದ್ಯುತ್‌ ಗ್ರಿಡ್‌ ವೈಫಲ್ಯಕ್ಕೆ ಸೈಬರ್ ದಾಳಿ ಕಾರಣವಲ್ಲ: ಸಚಿವ ಆರ್‌.ಕೆ. ಸಿಂಗ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 21:09 IST
Last Updated 2 ಮಾರ್ಚ್ 2021, 21:09 IST

ನವದೆಹಲಿ: ಮುಂಬೈನಲ್ಲಿ ವಿದ್ಯುತ್‌ ಗ್ರಿಡ್‌ ವೈಫಲ್ಯಕ್ಕೆ ಸೈಬರ್‌ ದಾಳಿ ಕಾರಣ ಎಂಬ ವರದಿಗಳನ್ನು ಕೇಂದ್ರ ವಿದ್ಯುತ್ ಸಚಿವ ಆರ್‌.ಕೆ. ಸಿಂಗ್‌ ಅಲ್ಲಗಳೆದಿದ್ದಾರೆ. ಗ್ರಿಡ್‌ ವೈಫಲ್ಯ ಮತ್ತು ಸೈಬರ್‌ ದಾಳಿಗೆ ನಂಟು ಕಲ್ಪಿಸುವ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ.

ಕಳೆದ ಅ. 2ರ ವಿದ್ಯುತ್‌ ಗ್ರಿಡ್‌ ವೈಫಲ್ಯದ ಬಗ್ಗೆ ಎರಡು ತಂಡಗಳು ತನಿಖೆ ನಡೆಸಿವೆ. ಈ ವೈಫಲ್ಯಕ್ಕೆ ಮಾನವ ಲೋಪ ಕಾರಣವೇ ಹೊರತು ಸೈಬರ್‌ ದಾಳಿ ಅಲ್ಲ ಎಂದು ಈ ಎರಡೂ ತಂಡಗಳು ವರದಿ ನೀಡಿವೆ ಎಂದು ಸಚಿವರು ಮಾಹಿತಿ ಕೊಟ್ಟಿದ್ದಾರೆ.

ಗ್ರಿಡ್‌ನ ಕಂಪ್ಯೂಟರ್‌ ವ್ಯವಸ್ಥೆಯನ್ನು ಹ್ಯಾಕ್‌ ಮಾಡಲು ಹ್ಯಾಕರ್‌ಗಳು ಯತ್ನಿಸಿದ್ದಾರೆ ಎಂಬುದನ್ನು ಸಿಂಗ್‌ ಒಪ್ಪಿಕೊಂಡಿದ್ದಾರೆ. ಉತ್ತರ ಮತ್ತು ದಕ್ಷಿಣದ ಪ್ರಾದೇಶಿಕ ಲೋಡ್‌ ಹಂಚಿಕೆ ಕೇಂದ್ರಗಳ ಕಂಪ್ಯೂಟರ್ ಜಾಲದ ಮೇಲೆ ಸೈಬರ್‌ ದಾಳಿ ನಡೆದಿದೆ. ಆದರೆ, ಈ ದಾಳಿಯು ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.