ADVERTISEMENT

ಏಪ್ರಿಲ್‌ನಿಂದ ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಗುಚ್ಛ ಹಂಚಿಕೆ

ಟೆಲಿಕಾಂ ಇಲಾಖೆಯಿಂದ ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್‌ಗೆ ಪುನಶ್ಚೇತನ ಪ್ಯಾಕೇಜ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 18:30 IST
Last Updated 6 ಫೆಬ್ರುವರಿ 2020, 18:30 IST
   

ನವದೆಹಲಿ: ಟೆಲಿಕಾಂ ಇಲಾಖೆಯು ಏಪ್ರಿಲ್ 1ರಿಂದ ಬಿಎಸ್‌ಎನ್ಎಲ್‌ಗೆ 4ಜಿ ತರಂಗಗುಚ್ಛ ಹಂಚಿಕೆ ಮಾಡಲಿದ್ದು, ಮುಂದಿನ 19 ತಿಂಗಳೊಳಗೆ ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನು ಆರಂಭಿಸಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

‘ಬಿಎಸ್‌ಎನ್ಎಲ್ ಮತ್ತು ಎಂಟಿಎನ್‌ಎಲ್‌ಗೆ ಸೇರಿದ ಜಾಗ ಮತ್ತು ಇತರ ಆಸ್ತಿಗಳನ್ನು ಇವುಗಳ ಪುನಶ್ಚೇತನ ಪ್ಯಾಕೇಜ್‌ಗೆ ಬಳಸಿಕೊಳ್ಳಲಾಗುವುದು’ ಎಂದು ಐಟಿ ಮತ್ತು ಟೆಲಿಕಾಂ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

‘ಟೆಲಿಕಾಂ ಸೇವಾ ಪೂರೈಕೆದಾರರಾದ (ಟಿಎಸ್‌ಪಿ), ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ತಮ್ಮ ಮೂಲಸೌಕರ್ಯಗಳನ್ನು ಹಂಚಿಕೊಳ್ಳಲು ಸರ್ಕಾರ ಕಾನೂನು ರೀತಿ ನಿಯಮಗಳನ್ನು ರೂಪಿಸಿದೆ’ ಎಂದು ರವಿಶಂಕರ್ ಪ್ರಸಾದ್ ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

‘ರಿಲಯನ್ಸ್‌ನ ಜಿಯೊ ಕಂಪನಿಯಂದ ಕ್ರಮವಾಗಿ ₹ 167.97 ಕೋಟಿ ಹಾಗೂ ₹ 11.62 ಕೋಟಿ ಬಾಕಿ ಇದೆ ಎಂದು ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಮಾಹಿತಿ ನೀಡಿವೆ’ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.