ADVERTISEMENT

ಕೋಮು ದಳ್ಳುರಿ ಹಬ್ಬಿಸಲು ಯತ್ನ: ಐವರ ಬಂಧನ

ಏಜೆನ್ಸೀಸ್
Published 3 ಸೆಪ್ಟೆಂಬರ್ 2018, 9:00 IST
Last Updated 3 ಸೆಪ್ಟೆಂಬರ್ 2018, 9:00 IST
ಬಂಧಿತ ಆರೋಪಿಗಳು   ಫೋ‍ಟೊ ಕೃಪೆ:ಎನ್‌ಡಿಟಿವಿ
ಬಂಧಿತ ಆರೋಪಿಗಳು ಫೋ‍ಟೊ ಕೃಪೆ:ಎನ್‌ಡಿಟಿವಿ   

ಕೊಯಮತ್ತೂರು:ಹಿಂದೂಪರ ಸಂಘಟನೆಗಳ ನಾಯಕರನ್ನು ಕೊಲ್ಲುವ ಮೂಲಕ ಸಮಾಜದಲ್ಲಿ ಕೋಮುದಳ್ಳುರಿ ಹಬ್ಬಿಸಲು ಸಂಚು ನಡೆಸಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ವಿಶೇಷ ತನಿಖಾ ದಳದ ‍ಪೊಲೀಸರುಬಂಧಿಸಿದ್ದಾರೆ.

‘ಹಿಂದೂ ಮಕ್ಕಳ್ಕಚ್ಚಿ’ (ಎಚ್‍ಎಂಕೆ) ಸ್ಥಾಪಕ ಅರ್ಜುನ್ ಸಂಪತ್ ಮತ್ತು ‘ಶಕ್ತಿ ಸೇನಾ ನಾಯಕ’ ಅನ್ಬು ಮಾರಿ ಅವರನ್ನು ಕೊಲ್ಲುವುದು ಆರೋಪಿಗಳ ಉದ್ದೇಶವಾಗಿತ್ತು’ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಪೆರೋಲ್‌ ಮೇಲೆ ಹೊರಗೆ ಬಂದಿದ್ದ ಅಪರಾಧಿಯೊಬ್ಬನ ಮದುವೆಯಲ್ಲಿ ಪಾಲ್ಗೊಳ್ಳಲು ಅವರೆಲ್ಲರೂ ನಗರಕ್ಕೆ ಬಂದಿದ್ದರು. ಈ ಕುರಿತುಗುಪ್ತಚರ ಇಲಾಖೆ ನೀಡಿದ್ದಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಬಂಧಿತರನ್ನು ಕೊಯಮತ್ತೂರಿನ ಆರ್‌.ಆಶಿಕ್‌, ಚೆನ್ನೈನ ಜಾಫರ್‌ ಸಾದಿಕ್‌ ಅಲಿ, ಎಸ್‌.ಶಲವುದ್ದೀನ್‌, ತಿರುವನಂತಪುರದ ಎಸ್‌. ಇಸ್ಲಾಯಿಲ್‌ ಹಾಗೂ ಪಲ್ಲವರಂನಎಸ್‌. ಶಂಸುದ್ದೀನ್‌ ಎಂದು ಗುರುತಿಸಲಾಗಿದೆ.ಬಂಧಿತರಿಂಧ ಮೊಟರ್‌ ಸೈಕಲ್‌, ಐದು ಮಚ್ಚು ಮತ್ತು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ನಗರದ ತ್ವರಿತ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಸೆ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.