ADVERTISEMENT

ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ₹3.16 ಕೋಟಿ ದೇಣಿಗೆ ನೀಡಿದ ಶಾಸಕ

ಪಿಟಿಐ
Published 6 ಫೆಬ್ರುವರಿ 2021, 13:05 IST
Last Updated 6 ಫೆಬ್ರುವರಿ 2021, 13:05 IST
ತಿರುಪತಿ ವೆಂಕಟೇಶ್ವರ ದೇವಾಲಯ
ತಿರುಪತಿ ವೆಂಕಟೇಶ್ವರ ದೇವಾಲಯ   

ತಿರುಪತಿ: ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಸದಸ್ಯ ಮತ್ತು ಎಐಎಡಿಎಂಕೆ ಶಾಸಕ ಆರ್‌. ಕುಮಾರಗುರು ಶನಿವಾರ ₹3.16 ಕೋಟಿ ದೇಣಿಗೆ ನೀಡಿದ್ದಾರೆ.

ಈ ದೇಣಿಗೆಯಿಂದ ತಮಿಳುನಾಡಿನ ತಮ್ಮ ವಿಧಾನಸಭಾ ಕ್ಷೇತ್ರವಾದ ಉಳುಂದುರ್ಪೆಟೈನಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಿಸುವಂತೆ ಕೋರಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ದೇವಸ್ಥಾನಕ್ಕಾಗಿ ನಾಲ್ಕು ಎಕರೆಯ ಜಾಗದ ದಾಖಲೆಗಳನ್ನು ಸಹ ಕುಮಾರಗುರು ನೀಡಿದ್ದಾರೆ. ಹೀಗಾಗಿ, ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆಯ ದಿನಾಂಕವನ್ನು ಶೀಘ್ರ ನಿಗದಿಪಡಿಸಲಾಗುವುದು ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ADVERTISEMENT

ಶಾಸಕ ಕುಮಾರಗುರು ಕಳೆದ ವರ್ಷ ಡಿಸೆಂಬರ್‌ 25ರಂದು ಈ ದೇವಸ್ಥಾನ ನಿರ್ಮಿಸಲು ₹1 ಕೋಟಿ ದೇಣಿಗೆ ನೀಡಿದ್ದರು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.