ADVERTISEMENT

ಸಿಬಲ್ ಮನೆ ಬಳಿ ಪ್ರತಿಭಟನೆ: ಕಟ್ಟುನಿಟ್ಟಿನ ಕ್ರಮಕ್ಕೆ ಸೋನಿಯಾಗೆ ಶರ್ಮಾ ಆಗ್ರಹ

ಪಿಟಿಐ
Published 30 ಸೆಪ್ಟೆಂಬರ್ 2021, 6:13 IST
Last Updated 30 ಸೆಪ್ಟೆಂಬರ್ 2021, 6:13 IST
ಆನಂದ ಶರ್ಮಾ
ಆನಂದ ಶರ್ಮಾ   

ನವದೆಹಲಿ (ಪಿಟಿಐ):‌ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಕ್ಕೆ ಮತ್ತೊಬ್ಬ ಮುಖಂಡ ಆನಂದ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಎಐಸಿಸಿ ಮುಖ್ಯಸ್ಥೆ ಸೋನಿಯಾಗಾಂಧಿ ಅವರಿಗೆ ಒತ್ತಾಯಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಶರ್ಮಾ, ‘ಸಿಬಲ್ ನಿವಾಸದ ಎದುರು ಕಾರ್ಯಕರ್ತರ ಗೂಂಡಾಗಿರಿ ಘಟನೆ ಕೇಳಿ ಆಘಾತ ಮತ್ತು ಬೇಸರವಾಯಿತು. ಕಾರ್ಯಕರ್ತರ ಇಂಥ ನಡವಳಿಕೆಗಳು ಪಕ್ಷಕ್ಕೆ ಅಪಖ್ಯಾತಿಯನ್ನು ತರುತ್ತವೆ. ಇಂಥ ಬೆಳವಣಿಗಗಳನ್ನು ತೀವ್ರವಾಗಿ ಖಂಡಿಸಬೇಕಾಗಿದೆ‘ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದ ಇತಿಹಾಸವಿದೆ. ಯಾವುದೇ ಬೆಳವಣಿಗೆ ಮತ್ತು ವಿಚಾರದ ಬಗ್ಗೆ ಅಭಿಪ್ರಾಯ ಮತ್ತು ವಿಭಿನ್ನ ಅಭಿಪ್ರಾಯ ಹೊಂದಿರುವುದು ಪ್ರಜಾಪ್ರಭುತ್ವದ ಲಕ್ಷಣ‘ ಎಂದು ಪ್ರತಿಪಾದಿಸಿದ್ದು, ಈ ಮೂಲಕ ಕಪಿಲ್ ಸಿಬಲ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಪಕ್ಷದ ನಾಯಕತ್ವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸಾಂಸ್ಥಿಕ ಬದಲಾವಣೆಗೆ ಒತ್ತಾಯಿಸಿ ಈ ಹಿಂದೆ ಪತ್ರ ಬರೆದಿದ್ದ 23 ಮುಖಂಡರಲ್ಲಿ ಆನಂದ್ ಶರ್ಮಾ ಮತ್ತು ಕಪಿಲ್‌ ಸಿಬಲ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.