ADVERTISEMENT

ಆಂಧ್ರಪ್ರದೇಶ ಸಿ.ಎಂ ಜಗನ್‌ ಮೋಹನ್ ರೆಡ್ಡಿ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

ತಿರುಪತಿ ದೇವಸ್ಥಾನ ಮಂಡಳಿಗೆ 52 ವಿಶೇಷ ಆಹ್ವಾನಿತ ಸದಸ್ಯರ ನೇಮಕ ವಿಚಾರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 16:09 IST
Last Updated 22 ಸೆಪ್ಟೆಂಬರ್ 2021, 16:09 IST
ಜಗನ್‌ ಮೋಹನ್ ರೆಡ್ಡಿ
ಜಗನ್‌ ಮೋಹನ್ ರೆಡ್ಡಿ   

ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ 52 ವಿಶೇಷ ಆಹ್ವಾನಿತ ಸದಸ್ಯರ ನೇಮಕ ಸೇರಿದಂತೆ ವೈಎಸ್‌ಆರ್‌ಸಿಪಿ ಸರ್ಕಾರದ ಎರಡು ವಿವಾದಾತ್ಮಕ ನೇಮಕಾತಿಯ ಆದೇಶಗಳಿಗೆ ಬುಧವಾರ ಆಂಧ್ರಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದ ನಿರ್ವಹಣೆಗಾಗಿ ಅಧ್ಯಕ್ಷ, 52 ವಿಶೇಷ ಆಹ್ವಾನಿತರು ಸೇರಿದಂತೆ ಒಟ್ಟು 81 ಸದಸ್ಯರ ನೇಮಕಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಟಿಡಿಪಿ ವಿರೋಧ ವ್ಯಕ್ತಪಡಿಸಿವೆ.

‘ಆಂಧ್ರಪ್ರದೇಶ ಚಾರಿಟೇಬಲ್ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ 1987ರ ನಿಯಮ ಉಲ್ಲಂಘಿಸಿ, ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ನೇಮಕಾತಿ ನಡೆಸಿದೆ’ ಎಂದು ಆರೋಪಿಸಿ ಬಿಜೆಪಿ, ಟಿಡಿಪಿ ನಾಯಕರು ಸೇರಿದಂತೆ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠವು, ಕಳೆದ ವಾರ ಸರ್ಕಾರ ಹೊರಡಿಸಿದ್ದ ಆದೇಶದ ಅನುಷ್ಠಾನಕ್ಕೆ ತಡೆಯೊಡ್ಡಿ ಮಧ್ಯಂತರ ಆದೇಶ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಟಿಟಿಡಿಗೆ ನೋಟಿಸ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.